- Advertisement -
- Advertisement -
ಕೊಲ್ಲಂ: ಮದುವೆಯನ್ನು ನೋಂದಾಯಿಸಲು ಯುವಕ ಬರಲಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಶರಣಾದ ಘಟನೆ ನಡೆದಿದೆ.ಮಣ್ಣೂರಿನ ಮಧುಭವನ ನಿವಾಸಿ ಧನ್ಯಾ (23) ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಧನ್ಯಾ ಮಣ್ಣೂರಿನ ಕಟ್ಟಂಪಲ್ಲಿಯ ಯುವಕನನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಕೆಲವು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿ ನಂತರ ಯುವಕನೊಂದಿಗೆ ಪತ್ತೆಯಾಗಿದ್ದಳು. ಪರಾರಿಯಾಗಿದ್ದ ಯುವಕನ ಜೊತೆ ಮದುವೆ ಮಾತುಕತೆಯು ಪೊಲೀಸರ ಸಮ್ಮುಖದಲ್ಲಿ ನಡೆದಿದ್ದು, ಆವಾಗ ಯುವಕ ಧನ್ಯಾಳನ್ನು ಮದುವೆಯಾಗಲು ಒಪ್ಪಿಕೊಂಡಿದೆ.
ಕೆಲವು ದಿನಗಳ ನಂತರ ಧನ್ಯಾ ಮತ್ತು ಅವಳ ಕುಟುಂಬವು ಮದುವೆಯನ್ನು ನೋಂದಾಯಿಸಲು ಬಂದಾಗ ಯುವಕ ಬರಲಿಲ್ಲ. ಪೋನ್ ಮಾಡಿದಾಗ ಯುವಕ ಕರೆಗೆ ಸಿಗಲಿಲ್ಲ. ಇದರಿಂದ ನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಧನ್ಯಾಳ ಮಹಿಳೆಯ ತಾಯಿ ವಿದೇಶದಲ್ಲಿದ್ದು, ಸಂಬಂಧಿಕರೊಂದಿಗೆ ವಾಸಿಸುತ್ತಿದ್ದರು.
- Advertisement -