- Advertisement -
- Advertisement -
ಮಂಗಳೂರು: ಮುಖ್ಯಮಂತ್ರಿ ಪದಕ ವಿಜೇತ, ಬಜ್ಪೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ, ಕೆ ಗೋಪಾಲಕೃಷ್ಣ ಅವರು ಎಎಸ್ಐ ಆಗಿ ಬಡ್ತಿ ಹೊಂದಿದ್ದಾರೆ. ಬಜ್ಪೆ ಪೊಲೀಸ್ ಠಾಣೆಗೆ ಎಎಸ್ಐ ಆಗಿ ಬಡ್ತಿ ಹೊಂದಿದ್ದಾರೆ. ಇವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದಕ್ಷ ಪೊಲೀಸ್, ಸರಳ ಸಜ್ಜನಿಕೆಯ, ಸಾಮಾಜಿಕ ಮುಂದಾಳು ಆಗಿ ಗುರುತಿಸಿಕೊಂಡವರು ಗೋಪಾಲಕೃಷ್ಣ. ಸೇವೆಯಲ್ಲಿ ಯಾವುದೇ ಲೋಪ ಬಾರದಂತೆ ಕರ್ತವ್ಯ ನಿರ್ವಹಿಸುವ ಇವರಿಗೆ ಮುಖ್ಯಮಂತ್ರಿ ಪದಕ ಲಭಿಸಿತ್ತು.
ಎಎಸ್ಐ ಆಗಿ ಭಡ್ತಿ ಹೊಂದಿದ ಕೆ ಗೋಪಾಲಕೃಷ್ಣ ಅವರು ಪ್ರೀತಿ, ಆಶೀರ್ವಾದಗೈದ ಪ್ರತಿಯೊಬ್ಬರಿಗೂ ಹಾಗೂ ಬೆಂಬಲ, ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿದ ಎಲ್ಲಾ ಉನ್ನತ ಅಧಿಕಾರಿಗಳಿಗೆ, ಬ್ಯಾಚ್ಮೇಟ್ಸ್, ಕುಟುಂಬಸ್ಥರು, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ನಾಗರಿಕರಿಗೆ ಧನ್ಯವಾದ ಹೇಳಿದ್ದಾರೆ.
- Advertisement -