- Advertisement -
- Advertisement -
ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಸದಸ್ಯೆ ಪಿ.ಟಿ.ಉಷಾ ಮತ್ತು ವೈಎಸ್ಆರ್ಸಿಪಿ ಸಂಸದ ವಿ.ವಿಜಯಸಾಯಿ ರೆಡ್ಡಿ ಅವರನ್ನು ಮೇಲ್ಮನೆಯ ಉಪ-ಸಭಾಪತಿಯ ಸಮಿತಿಗೆ ನೇಮಕ ಮಾಡಲಾಗಿದೆ.
ರಾಜ್ಯಸಭೆಯ ಉಪಸಭಾಪತಿಯವರ ನೇತೃತ್ವದಲ್ಲಿ ಈ ಸಮಿತಿ ಇರುತ್ತದೆ. ಅದರಲ್ಲಿ ಒಟ್ಟು 12 ಮಂದಿ ಸದಸ್ಯರು ಇರುತ್ತಾರೆ. ಉಪಸಭಾಪತಿಯಾಗಿರುವ ಹರಿವಂಶ ನಾರಾಯಣ ಸಿಂಗ್ ಅದರ ಅಧ್ಯಕ್ಷರು.
ಅವರಿಗೆ ಸಮಿತಿಗೆ ಸದಸ್ಯರನ್ನು ನಾಮ ನಿರ್ದೇಶನಗೊಳಿಸಲು ಅಧಿಕಾರ ಇರುತ್ತದೆ. ಜೊತೆಗೆ ಅವರಿಗೆ ಆರು ಮಂದಿ ಉಪಾಧ್ಯಕ್ಷರನ್ನು ನೇಮಿಸಲೂ ಅಧಿಕಾರ ಇದೆ.
- Advertisement -