Sunday, June 29, 2025
spot_imgspot_img
spot_imgspot_img

ವಿಟ್ಲ: ಅನಾರೋಗ್ಯದಿಂದ ಬಳಲುತ್ತಿರುವ ಯುವಕ; ನೆರವಿನ ನಿರೀಕ್ಷೆಯಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರು

- Advertisement -
- Advertisement -

ವಿಟ್ಲ: ಅನಾರೋಗ್ಯದಿಂದ ಬಳಲುತ್ತಿರುವ ಯುವಕನ ಚಿಕಿತ್ಸಾ ವೆಚ್ಚಕ್ಕಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರು ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಉಕ್ಕುಡ ದರ್ಬೆಯ ನವೀನ್‌ ಕುಮಾರ್ ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ಧಾರೆ. ತೀರಾ ಬಡ ಕುಟುಂಬವಾಗಿದ್ದು, ಸಹೃದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಉಕ್ಕುಡ ದರ್ಬೆಯ ಉಮೇಶ್‌ ಆಚಾರ್ಯರವರ ಮಗ ನವೀನ್‌ ಕುಮಾರ್‌ ಎರಡು ವರ್ಷದ ಹಿಂದೆ ಉದ್ಯೋಗದಲ್ಲಿರುವ ಸಮಯ ರಕ್ತ ಪರೀಕ್ಷೆ ಮಾಡುವ ವೇಳೆ ಕಿಡ್ನಿ ವೈಫಲ್ಯದ ಸಮಸ್ಯೆ ಇದೆಯೆಂದು ವೈದ್ಯರು ಸೂಚಿಸಿದ್ದರು. ವೈದ್ಯರ ಸೂಚನೆಯಂತೆ ಎರಡು ವರ್ಷದಿಂದ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್‌ ಮಾಡಿಕೊಂಡು ಬರುತ್ತಿದ್ದರು.

ಒಂದು ವಾರದ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ ಅವರನ್ನು ಮಂಗಳೂರಿನ ಮಂಗಳ ಹಾಸ್ಪಿಟಲ್‌ ಮತ್ತು ಕಿಡ್ನಿ ಪೌಂಡೇಶನ್‌ನಲ್ಲಿ ದಾಖಲು ಮಾಡಲಾಗಿದೆ. ವೈದ್ಯರು ಪರೀಕ್ಷಿಸಿದ ನಂತರ ಕಿಡ್ನಿ, ಮೂತ್ರಪಿಂಡ, ಶ್ವಾಸಕೋಶ, ತಲೆ ಸಂಬಂಧಿಸಿದಂತೆ ಸಮಸ್ಯೆ ಇದೆಯೆಂದು ವೈದ್ಯರು ತಿಳಿಸಿದ್ದಾರೆ. ದಿನಕ್ಕೆ 10 ರಿಂದ 15 ಸಾವಿರ ರೂ. ಚಿಕಿತ್ಸೆಗೆ ಬೇಕಾಗಿದ್ದು, ತೀರಾ ಬಡತನದಲ್ಲಿರುವ ಕುಟುಂಬಕ್ಕೆ ಇಷ್ಟೊಂದು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ನವೀನ್‌ ಕುಮಾರ್‌ ಯುವಜನ ಸೇವಾ ಟ್ರಸ್ಟ್‌(ರಿ) ಉಕ್ಕುಡ ದರ್ಬೆ ಇದರ ಸಕ್ರೀಯ ಸದಸ್ಯನಾಗಿದ್ದು, ಸ್ನೇಹಿತನ ಕುಟುಂಬಕ್ಕೆ ಸಹಾಯವಾಗಲೆಂದು ಯುವಜನ ಸೇವಾ ಟ್ರಸ್ಟ್‌(ರಿ) ಇದರ ಅಧ್ಯಕ್ಷರು ಮತ್ತು ಸರ್ವಸದಸ್ಯರುಗಳು ಸಂಘ-ಸಂಸ್ಥೆಗಳ, ಸಹೃದಯಿ ದಾನಿಗಳ ಸಹಾಯ ಯಾಚಿಸಿದ್ದಾರೆ.

Naveen kumar
A/c No: 3812500100071001
IFSC code: KARB000381
Branch; Kepu G.P
Google pay: 9480764030

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:: ಯುವಜನ ಸೇವಾ ಟ್ರಸ್ಟ್‌(ರಿ) ಇದರ ಅಧ್ಯಕ್ಷ: 9972770082
ಯುವಜನ ಸೇವಾ ಟ್ರಸ್ಟ್‌(ರಿ)
ಇದರ ಕಾರ್ಯದರ್ಶಿ: 9731160039

- Advertisement -

Related news

error: Content is protected !!