Monday, June 30, 2025
spot_imgspot_img
spot_imgspot_img

ವಿಟ್ಲ: ಆಸ್ತಿಗಾಗಿ ಜಗಳ – ತಾಯಿ ಮತ್ತು ಅಣ್ಣನ ಮೇಲೆ ಹಲ್ಲೆಗೈದ ಸಹೋದರ

- Advertisement -
- Advertisement -

ವಿಟ್ಲ: ಮಗನೊಬ್ಬ ಆಸ್ತಿಯಲ್ಲಿ ಪಾಲು ಕೊಡುವಂತೆ ಒತ್ತಾಯಿಸಿ ಹೆತ್ತ ತಾಯಿಗೆ ಬೆದರಿಕೆ ಹಾಕಿ ಹಲ್ಲೆ ಮತ್ತು ಇದನ್ನು ತಡೆಯಲು ಬಂದ ಸಹೋದರನಿಗೆ ಹಲ್ಲೆ ಮಾಡಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಎಂಬಲ್ಲಿ ನಡೆದಿದೆ. ಸಚಿಗ್‌ ಹಲ್ಲೆಗೈದವ. ರೋಹಿಣಿ ಮತ್ತು ಸಚಿನ್ ಹಲ್ಲೆಗೊಳಗಾದವರು.

ಇಡ್ಕಿದು ಗ್ರಾಮದ ನಾರಾಯಣ ಗೌಡ ಎಂಬುವವರ ಹಿರಿಯ ಪುತ್ರ ಚೇತನ್ ಕುಮಾರ್ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಮನೆಯ ಅಡಿಗೆ ಕೋಣೆಯಿಂದ ಅಮ್ಮ ರೋಹಿಣಿ ಅಳುವ ಶಬ್ದ ಕೇಳಿಬರುತ್ತಿತ್ತು. ತಕ್ಷಣ ಅಡುಗೆ ಕೋಣೆಗೆ ಓಡಿಹೋದಾಗ ಅಲ್ಲಿ ತಾಯಿ ರೋಹಿಣಿಯನ್ನು ಚೇತನ್ ಅವರ ತಮ್ಮ ಸಚಿನ್ ಎಂಬಾತನು ತಲೆ ಕೂದಲು ಹಿಡಿದು, ಮುಖಕ್ಕೆ ಕೈಯಿಂದ ಹೊಡೆಯುತ್ತಾ, ನನಗೆ ಜಾಗದಲ್ಲಿ ಪಾಲುಕೊಡಿ, ಇಲ್ಲದಿದ್ದರೆ ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಹೇಳುತ್ತಿದ್ದನು.

ತಕ್ಷಣ ಇದನ್ನು ತಡೆಯಲು ಚೇತನ್ ಮುಂದಾದಾಗ ಸಚಿನ್ ಅಲ್ಲೇ ಇದ್ದ ಚೂರಿಯಿಂದ ಅಮ್ಮನಿಗೆ ಚುಚ್ಚಲು ಮುಂದಾಗಿದ್ದಾನೆ. ಬಳಿಕ ಚೇತನ್ ಚೂರಿಯನ್ನು ಕಸಿಯುತ್ತಿದ್ದಂತೆ ಅಡುಗೆ ಕೋಣೆಯಲ್ಲಿದ್ದ ಕಲ್ಲನ್ನು ತೆಗೆದು ಚೇತನ್ ತಲೆಯ ಹಿಂಬದಿಗೆ ಹೊಡೆದು ಕೈಗೆ ಕಚ್ಚಿ ಓಡಿಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಗಾಯಗೊಂಡ ರೋಹಿಣಿ ಮತ್ತು ಸಚಿನ್ ಎಂಬವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!