Monday, June 30, 2025
spot_imgspot_img
spot_imgspot_img

ವಿಟ್ಲ: ಆ.31ರಂದು ಶ್ರೀ ಗಣೇಶೋತ್ಸವ ಸಮಿತಿ, ಕೆಲಿಂಜ ಇದರ ಆಶ್ರಯದಲ್ಲಿ 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

- Advertisement -
- Advertisement -

ವಿಟ್ಲ: ಶ್ರೀ ಗಣೇಶೋತ್ಸವ ಸಮಿತಿ, ಕೆಲಿಂಜ ಇದರ ಆಶ್ರಯದಲ್ಲಿ ನಡೆಯುವ 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ದಿನಾಂಕ: 31-08-2022ರಂದು ಶ್ರೀ ನಿಕೇತನ ಮಂದಿರ,ಕೆಲಿಂಜ ಇಲ್ಲಿ ವಿವಿಧ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶ್ರೀ ಕ್ಷೇತ್ರ ಕೆಲಿಂಜ ಅನುವಂಶಿಕ ಆಡಳಿತ ಮೊಕ್ತೇಸರರಾದ ಶಂಕರನಾರಾಯಣ ಭಟ್‌ ಪುಂಡಿಕ್ಯಾ ಬೆಳಗಿಸಲಿದ್ದಾರೆ. ಮೂರ್ತಿ ಪ್ರತಿಷ್ಠೆಯನ್ನು ಶ್ರೀ ಕ್ಷೇತ್ರ ಕೆಲಿಂಜದ ಪ್ರಧಾನ ಅರ್ಚಕರಾದ ಮಹೇಶ್‌ ಭಟ್‌ ನೆರವೇರಿಸಲಿದ್ದಾರೆ.

ಧಾರ್ಮಿಕ ಸಬಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ಇದರ ಅಧ್ಯಕ್ಷರಾದ ಪದ್ಮನಾಭ ಗೌಡ ಅಡ್ಯೇಯಿ ವಹಿಸಲಿದ್ದು, ಅತಿಥಿಗಳಾಗಿ ಎ.ಜೆ ಆಸ್ಪತ್ರೆ ಮಂಗಳೂರು ಡಾ.ಅಶ್ವಿನ್‌ ಆಳ್ವ ಕೆ. ಕರಿಂಕ, ಪಿ.ಎಲ್‌.ಡಿ ಬ್ಯಾಂಕ್‌ ಬಂಟ್ವಾಳ ಉಪಾಧ್ಯಕ್ಷರಾದ ಚಂದ್ರಶೇಖರ್‍ ಬಂಗೇರ ಬಾಯಿಲ, ನೇರಳಕಟ್ಟೆ ಸಿಎ ಬ್ಯಾಂಕ್‌ ಉಪಾಧ್ಯಕ್ಷರಾದ ಡಿ.ತನಿಯಪ್ಪ ಗೌಡ, ಶ್ರೀ ದೇವಿ ಕನ್‌ಸ್ಟಕ್ಷನ್‌ ಮಂಗಳೂರು ಸಂದೀಪ್‌ ಶೆಟ್ಟಿ, ವಿ.ಹಿಂ.ಪ. ಕಲ್ಲಡ್ಕ ಪ್ರಖಂಡ ಅಧ್ಯಕ್ಷರಾದ ಸಚಿನ್‌ ಮೆಲ್ಕಾರ್‌, ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ, ಮಾಜಿ ಅಧ್ಯಕ್ಷರಾದ ದೇವದಾಸ ರೈ ಮಾಡದಾರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1.00 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3.00 ಗಂಟೆಗೆ ಮಹಾಮಂಗಳಾರತಿ ಬಳಿಕ ಶೋಭಾಯಾತ್ರೆ ಶ್ರೀ ನಿಕೇತನ ಮಂದಿರದಿಂದ ಹೊರಟು ಒಕ್ಕೆತ್ತೂರು ಹೊಳೆಯಲ್ಲಿ ಜಲಸ್ತಂಭನ ನಡೆಯಲಿದೆ.

- Advertisement -

Related news

error: Content is protected !!