Monday, June 30, 2025
spot_imgspot_img
spot_imgspot_img

ವಿಟ್ಲ: ಕರ್ಣಾಟಕ ಬ್ಯಾಂಕ್‌ನ ನೂತನ ಶಾಖೆ ವಿಟ್ಲದಲ್ಲಿ ಶುಭಾರಂಭ

- Advertisement -
- Advertisement -

ಕರ್ಣಾಟಕ ಬ್ಯಾಂಕ್‌ನ ನೂತನ ಶಾಖೆ ವಿಟ್ಲದಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊಂಡಿದೆ. ನಿಮ್ಮ ಕುಟುಂಬದ ಬ್ಯಾಂಕ್ ಭಾರತದಾದ್ಯಂತ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುವ ಈ ಬ್ಯಾಂಕ್‌ನ 895ನೇ ಶಾಖೆ ಮತ್ತು ಮಿನಿ ಇ-ಲಾಬಿ ಉದ್ಘಾಟನೆ ನಡೆಯಿತು.

ವಿಟ್ಲ ಮಂಗಳೂರು ರಸ್ತೆಯ ಯಮಹಾ ಶೋ ರೂಮ್‌ ಎದುರುಗಡೆ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯಿರುವ ಶ್ರೀ ಕಾಂಪೆಕ್ಸ್‌ನ ನೆಲಮಹಡಿಯಲ್ಲಿ ಕಾರ್ಯಚರಿಸಲಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರರು ಬಂಗಾರು ಅರಸರು ವಿಟ್ಲ ಅರಮನೆ ಶಾಖೆಯನ್ನು ಉದ್ಘಾಟಿಸಿದರು. ವಿಟ್ಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಾಗರಾಜ್ ಹೆಚ್.ಇ ಮಿನಿ ಇ-ಲಾಬಿ ಯನ್ನು ಉದ್ಘಾಟಿಸಿದರು. ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಮಹಾಲಿಂಗೇಶ್ವರ ಕೆ. ಅಧ್ಯಕ್ಷತೆ ವಹಿಸಿದ್ದರು.

ಬ್ಯಾಂಕ್‌ನ ಸಿಬ್ಬಂದಿ ಸಹನಾ ಟಿ ಪ್ರಾರ್ಥಿಸಿ, ಮಂಗಳೂರು ಪ್ರಾದೇಶಿಕ ಕಚೇರಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡ್ಯಾನಿಶ್ ಸ್ವಾಗತಿಸಿ, ಪ್ರಸ್ತಾವಿಕಗೈದರು. ಬ್ರಾಂಚ್ ಮ್ಯಾನೇಜರ್ ಭರತ್‌ರಾಜ್ ಹೆಚ್ ಧನ್ಯವಾದಗೈದರು. ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ಸಿಬ್ಬಂದಿಗಳು, ಗ್ರಾಹಕ ಬಂಧುಗಳು, ವಿವಿಧ ಬ್ರಾಂಚ್‌ನ ಸಿಬ್ಬಂದಿ, ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!