- Advertisement -
- Advertisement -


ವಿಟ್ಲ: ಶಿಕ್ಷಣ ವ್ಯವಸ್ಥೆಗೆ ಪ್ರೇರಣೆ ನೀಡುವ ಸಮಾಜ ಸೇವಕರು, ಸಂಘ ಸಂಸ್ಥೆಗಳು ಮುಂದೆ ಬಂದಾಗ ಪರಿಣಾಮಕಾರಿ ಬದಲಾವಣೆ ಸಾಧ್ಯವೆಂದು ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ಬಾಯಿಲ ವೀರಕಂಬ ಇಲ್ಲಿ ಪೋಷಕರ ಸಭೆ ಹಾಗೂ ಶಾಲಾಭಿವೃದ್ಧಿ ಸಮಿತಿಯ ಆಯ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೋಷಕರ ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷೆಯಾಗಿ ಲಕ್ಷ್ಮಿ ಹಾಗೂ ಉಪಾಧ್ಯಕ್ಷೆಯಾಗಿ ವಸಂತಿ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಗೋಲಿಮಾರ್ ದಾನಿಗಳಿಂದ ಕೊಡಲ್ಪಟ್ಟ ಬರವಣಿಗೆ ಪುಸ್ತಕಗಳನ್ನು ಮಕ್ಕಳ ಪೋಷಕರಿಗೆ ವಿತರಿಸಿದರು.
25 ನೇ ತಾರೀಖಿನಿಂದ ಪೂರ್ವ ಪ್ರಾರ್ಥಮಿಕ ತರಗತಿಗಳು ಪ್ರಾರಂಭವಾಗುವ ಕಾರಣದಿಂದ ಪಂಚಾಯತ್ ವತಿಯಿಂದ ಪೂರ್ತಿ ಶಾಲೆಗೆ ಸ್ಯಾನಿಟೈಸರ್ ಮಾಡಲಾಯಿತು . ಮುಖ್ಯ ಶಿಕ್ಷಕಿ ಜೆಸಿಂತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕಿ ಸುಜಾತ ಸಹಕರಿಸಿದರು.





- Advertisement -








