
ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳ 05ರಿಂದ 10ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ಕೃಷ್ಣಪ್ಪ ಗೌಡ ಗುರ್ಮೆಯವರ ಅಧ್ಯಕ್ಷತೆಯಲ್ಲಿ ಗುರ್ಮೆ ತರವಾಡ್ ವಲಯ ಸಮಿತಿಯ ರಚನೆಯ ಸಭೆ ನಡೆಸಲಾಯಿತು.
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಸಹಕರಿಸುವಂತೆ ಈ ವಲಯದ ಜನರು ಸಹಕರಿಸಬೇಕೆಂದು ಕುಕ್ಕಾಜೆ ಕ್ಷೇತ್ರ ಪರಮಪೂಜ್ಯ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರು ವಿನಂತಿಸಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿದೆ ಎಂಬುದನ್ನು ನೀವು ಎಲ್ಲರೂ ನಮ್ಮೊಂದಿಗಿದ್ದು ನಡೆಸಿಕೊಡಬೇಕೆಂದು ವಿನಂತಿಸಿದರು. ಕುಕ್ಕಾಜೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಗೂ ಶ್ರಮದಾನ ಮೂಲಕ ಈ ಹಿಂದೆಯೂ ಸಹಕರಿಸಿರುತ್ತೇವೆ. ಮಂದೆಯೂ ಸಹಕರಿಸುವುದಾಗಿ ವಲಯ ಸಮಿತಿಯವರು ಭರವಸೆ ನೀಡಿದರು, ಹರೀಶ್, ಜಯರಾಮ, ಗಂಗಾಧರ ಗೌಡ, ತಿಮ್ಮಪ್ಪ ಗೌಡ, ಹಾಗೂ ಕುಕ್ಕಾಜೆ ಕ್ಷೇತ್ರದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗುರ್ಮೆ ವಲಯ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಕೃಷ್ಣಪ್ಪ ಗೌಡ, ಉಪಾಧ್ಯರಾಗಿ ಗಂಗಾಧರ ಗೌಡ, ಕಾರ್ಯದರ್ಶಿಯಾಗಿ, ಹರೀಶ್ ಜತೆ ಕಾರ್ಯದರ್ಶಿಯಾಗಿ ಜಯರಾಮ್, ಕಾರ್ಯಕಾರಿ ಸದಸ್ಯರಾಗಿ ತಿಮ್ಮಪ್ಪ ಗೌಡ, ವಾಸು ಗೌಡ, ಜೊಳಿಯಪ್ಪ ಗೌಡ, ಪೂವಪ್ಪ ಗೌಡ, ಜಗನ್ನಾಥ ಗೌಡ, ಸೇಸಪ್ಪ ಗೌಡ, ಆನಂದ ಗೌಡ, ಶ್ರೀಧರ ಗೌಡ, ಬಾಸ್ಕರ ಗೌಡ, ಶ್ರೀನಿವಾಸ ಗೌಡ, ಹಾಗೂ ಸುಮಾರು 25 ಮಂದಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಹರೀಶ್ ಗುರ್ಮೆ ಸ್ವಾಗತಿಸಿ, ಸತ್ಯ ಪ್ರಸಾದ್ ಕುಕ್ಕಾಜೆ ವಂದಿಸಿದರು.
- ಪುರಿ ರಥಯಾತ್ರೆ ವೇಳೆ ಕಾಲ್ತುಳಿತ: ಡಿಸಿ, ಎಸ್ಪಿ ವರ್ಗಾವಣೆ; ಇಬ್ಬರು ಪೊಲೀಸರು ಸಸ್ಪೆಂಡ್
- OLX app ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿತನ ಬಂಧನ
- ಶ್ರೀರಾಮಸೇನೆಯ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ; ಗೋರಕ್ಷಣೆೆಗೆ ಹೋದವರ ಮೇಲೆ ಮನಬಂದಂತೆ ಥಳಿತ!
- ಮಂಗಳೂರು: ಯು.ಕೆ.ಯಲ್ಲಿ ಉದ್ಯೋಗ – ವೀಸಾ ಕೊಡಿಸುವುದಾಗಿ ನಂಬಿಸಿ ವಂಚನೆ..!
- ಪುತ್ತೂರು: ಲಾರಿ-ಜೀಪ್ ನಡುವೆ ಡಿಕ್ಕಿ; ಜೀಪ್ ಚಾಲಕನಿಗೆ ಗಾಯ; ಆಸ್ಪತ್ರೆಗೆ ದಾಖಲು..!

