Monday, June 30, 2025
spot_imgspot_img
spot_imgspot_img

ವಿಟ್ಲ: ಡಿ. 28 ಪರಮಪೂಜ್ಯ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ “ಷಷ್ಟ್ಯಬ್ದ ಸಂಭ್ರಮ” ಪ್ರಯುಕ್ತ ‘ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ’

- Advertisement -
- Advertisement -

ಪರಮಪೂಜ್ಯ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ “ಷಷ್ಟ್ಯಬ್ದ ಸಂಭ್ರಮ” ಪ್ರಯುಕ್ತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮತ್ತು ಸ್ವ-ಸಹಾಯ ಸಂಘಗಳ ಘಟ ಸಮಿತಿ, ಸಾಲೆತ್ತೂರು ಗ್ರಾಮ ಆಯೋಜಕತ್ವದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ಪುತ್ತೂರು, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ ಸಿಐ ಇದರ ಜಂಟಿ ಆಶ್ರಯದಲ್ಲಿ ಡಿ.28 ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಸಾಲೆತ್ತೂರಿನಲ್ಲಿ ನಡೆಯಲಿರುವುದು.

ಬೆಳಿಗ್ಗೆ 8.30 ರಿಂದ ಶಿಬಿರ ಸ್ಥಳದಲ್ಲಿ ನೋಂದಾವಣೆ ಮಾಡಿಸಿಕೊಳ್ಳಲು ಅವಕಾಶವಿದೆ.

vtv vitla

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮತ್ತು ಸ್ವ-ಸಹಾಯ ಸಂಘಗಳ ಘಟ ಸಮಿತಿ, ಸಾಲೆತ್ತೂರು ಇದರ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

  1. ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಹಾಗೂ ಮಂಗಳೂರು ಜಿಲ್ಲಾ ಆಸ್ಪತ್ರೆ ಇದರ ಸಹಯೋಗದೊಂದಿಗೆ
    ಕೆ.ಎಂ.ಸಿ. ಆಸ್ಪತ್ರೆಯ ಪ್ರಸಿದ್ಧ ನೇತ್ರ ತಜ್ಞರು ಭಾಗವಹಿಸಲಿದ್ದಾರೆ.
  2. ಆನಂದಾಶ್ರಮ ಸೇವಾ ಟ್ರಸ್ಟ್ (ಲಿ. ಮತ್ತೂರು ಇದರ ವತಿಯಿಂದ ಉಚಿತವಾಗಿ ಲಭ್ಯ ಕನ್ನಡಕಗಳನ್ನು ಏತಲಿಸಲಾಗುವುದು.
  3. ಸರಕಾರಿ ವನ್ಹಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಆಪರೇಶನ್ ಮಾಡಲಾಗುವುದು, ಆಪರೇಶನ್ ಮಾಡಿಸುವವರು ಬರುವಾಗ ಎರಡು ದಿನಕ್ಕೆ ಬೇಕಾಗುವ
    ಬಟ್ಟೆ, ಬಟ್ಟಲು-ಲೋಟ ತೆಗೆದುಕೊಂಡು ಒಬ್ಬ ಸಹಾಯಕರೊಡನೆ ಬರಬೇಕು.
vtv vitla
vtv vitla

ಸೌಲಭ್ಯಗಳು: ಉಚಿತ ಕಣ್ಣಿನ ಪರೀಕ್ಷೆ, ಚಿಕಿತ್ಸೆ ಮತ್ತು ಸಲಹೆ ಉಚಿತ ಕಣ್ಣು ಹೊರೆ ಆಪರೇಶನ್
ಉಚಿತ ಪ್ರಯಾಣ, ವಸತಿ, ಊಟ-ಉಪಹಾರ ಆಪರೇಶನ್, ಉಚಿತ ಕನ್ನಡಕ ವಿತರಣೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ:
9902799126, 7760015240, 8088899139

- Advertisement -

Related news

error: Content is protected !!