Saturday, June 28, 2025
spot_imgspot_img
spot_imgspot_img

ವಿಟ್ಲ: ತಮ್ಮ ನಿಂದ ಅಣ್ಣ ನಿಗೆ ತಲವಾರಿನಿಂದ ಹಲ್ಲೆ; ಬಿಡಿಸಲು ಬಂದ ತಾಯಿಗೂ ಹಲ್ಲೆ

- Advertisement -
- Advertisement -

ವಿಟ್ಲ: ವ್ಯಕ್ತಿಯೋರ್ವ ಆತನ ಅಣ್ಣ ಮತ್ತು ಬಿಡಿಸಲು ಬಂದ ತಾಯಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಅಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ನಡೆದಿದೆ.

ಆರೋಪಿ ಹರೀಶ್

ಅಳಿಕೆ ನೆಗಳಗುಳಿ ನಿವಾಸಿ ಕೃಷ್ಣ ಕುಮಾರ್ ಮತ್ತು ಆತನ ತಾಯಿ ವಾರಿಜ ಹಲ್ಲೆಗೊಳಗಾದವರು.

ಕೃಷ್ಣ ಕುಮಾರ್ ಅವರ ಸಹೋದರ ಹರೀಶ್ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ತಾಯಿಗೆ ಕೆಲ ತಿಂಗಳ ಹಿಂದೆಯೂ ಈತ ಮಾರಾಣಾಂತಿಕ ಹಲ್ಲೆ ನಡೆಸಿದ್ದನು.

ಕುಡಿತ ಮತ್ತಿನಲ್ಲಿ ಹರೀಶ್ ಇಂದು ಗಲಾಟೆ ನಡೆಸಿದ್ದಾನೆ ಎನ್ನಲಾಗಿದ್ದು, ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಕೃಷ್ಣ ಕುಮಾರ್ ರವರಿಗೆ ಗಂಭೀರ ಗಾಯಗಳಾಗಿವೆ.

- Advertisement -

Related news

error: Content is protected !!