
ಸ ಉ ಹಿ ಪ್ರಾ ಶಾಲೆ ಮಿತ್ತೂರು ಇಡ್ಕಿದು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ. ಇಲ್ಲಿ ಮಕ್ಕಳ ಸಂಭ್ರಮ 2022 ಹಾಗೂ ನೂತನ ಕೊಠಡಿಯ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರು ಇವರು ವಿದ್ಯುಕ್ತವಾಗಿ ಚಾಲನೆ ನೀಡಿದರು.

ಶಾಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಯುತರು ಇಡ್ಕಿದು ಪಂಚಾಯತ್, ಶಾಲಾ ಅಭಿವೃದ್ಧಿ ಸಮಿತಿ , ಹಳೆ ವಿದ್ಯಾರ್ಥಿಗಳು ಹಾಗೂ ಗುರು ವೃಂದದವರ ನಿರಂತರ ಕ್ರಿಯಾಶೀಲ ಶಾಲಾ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು . ನೂತನ ಕೊಠಡಿಗೆ 13 ಲಕ್ಷದ 90 ಸಾವಿರ ಅನುದಾನ ಒದಗಿಸಿದ ಶಾಲೆಯ ಮುಂದಿನ ಬೇಡಿಕೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸಿಟಿ( ರಿ) ಪುತ್ತೂರು ಇದರ ಅಧ್ಯಕ್ಷರಾದ ರೊ. ಪ್ರಶಾಂತ್ ಶೆಣೈ, ಉದ್ಯಮಿಗಳು ಹಾಗೂ ಹಿರಿಯ ವಿದ್ಯಾರ್ಥಿ ವಲೇರಿಯನ್ ಡಿಸೋಜ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ಇಡ್ಕಿದು ಪಂಚಾಯತ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಕ ಯೂಸುಫ್ ಮಾಸ್ಟರ್ , ಪಂಚಾಯತ್ ಸದಸ್ಯರುಗಳಾದ ರಮೇಶ್ ಪೂಜಾರಿ ,ಸಂಜೀವ ಪೂಜಾರಿ, ಜಯಂತಿ , ಶೋಭಾ , ಶಿಕ್ಷಣ ಸಂಯೋಜಕ ಸುಧಾ, ಪ್ರತಿಮಾ , ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಡಿ , ಹಿರಿಯ ವಿದ್ಯಾರ್ಥಿ ತಾರನಾಥ ಮಲ್ಲಿಕಾ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಆದ೦ MMS, ಮುಖ್ಯ ಗುರುಗಳಾದ ಸರೋಜಾ.ಎ ಉಪಸ್ಥಿತರಿದ್ದರು.

ವಸಂತ ಟಿ ಸಹಾಯಕ ಇಂಜಿನಿಯರ್ ಮೆಸ್ಕಾಂ ಉಜಿರೆ ಹಾಗೂ ಪ್ಲೇವಿ ಮೈಕಲ್ ಇವರಿಬ್ಬರನ್ನು ಭವ್ಯವೇದಿಕೆಯಲ್ಲಿ ಸನ್ಮಾನಿಸಲಾಯಿತು. ಶಾಲೆಯ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗೆ ಹಿರಿಯ ವಿದ್ಯಾರ್ಥಿ ವಲೇರಿಯನ್ ಡಿಸೋಜ ಉದ್ಯಮಿಗಳು ಮಂಗಳೂರು, ಸುನಿಲ್ ಡಿಸೋಜ ಆಸ್ಟ್ರೇಲಿಯಾ, ಪ್ಲೇವಿ ಮೈಕಲ್ ಬೆಂಗಳೂರು, ರವಿ ನಾರಾಯಣ ಉಪಾಧ್ಯಾಯ ಬೆಂಗಳೂರು , ತಿಮ್ಮಪ್ಪ ನಾಯ್ಕ ಪೊಲೀಸ್ ಇನ್ಸ್ಪೆಕ್ಟರ್ ಕುಮಟ , ಡಾIIಗೋಪಾಲ ಉಪಾಧ್ಯಾಯ ದುಬೈ, ಖಾಸಿಂ ಗೇರುಕಟ್ಟೆ , ರಾಜೇಶ್ ಪುರಾಣಿಕ್, ಸುಧೀರ್ ಕುಮಾರ್ ಶೆಟ್ಟಿ ಇಡ್ಕಿದು , ಪ್ರೊಫೆಸರ್ ರಘು ಇಡ್ಕಿದು ಇವರುಗಳು ಧನ ಸಹಾಯ ಮಾಡಿರುತ್ತಾರೆ.

.
