

ಅರುಣ್ ವಿಟ್ಲ. ವಿಟ್ಲ ಬಿಜೆಪಿ ಪಾಳಯದ ಪ್ರಮುಖರೂ ಅಂದರೆ ತಪ್ಪಿಲ್ಲ..! ಕಳೆದ ಹತ್ತಾರು ವರ್ಷಗಳಿಂದ ಕಮಲ ಪಾಳಯದಲ್ಲಿ ಗುರುತಿಸಿಕೊಂಡ ಇವರ ಸಾಧನೆ ಅಪಾರ. ಸಂಘಟನೆ, ಹಿಂದುತ್ವತ ಆಧಾರದಲ್ಲಿ ರಾಜಕೀಯ ಪ್ರವೇಶಿಸಿದ ಇವರು, ಅಭಿವೃದ್ಧಿಯೇ ಮಂತ್ರ ಎನ್ನುವ ಧ್ಯೇಯ ವಾಕ್ಯದೊಂದಿಗೆ, ವಾರ್ಡ್ 1ರ ಅಭಿವೃದ್ಧಿಯ ಹರಿಹಾರರಾಗಿ ಜನ ಮೆಚ್ಚುಗೆ ಗಳಿಸಿದರು.


ವಿಟ್ಲ ಪಟ್ಟಣ ಪಂಚಾಯತ್’ನ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕೀರ್ತಿ ಅರುಣ್ ವಿಟ್ಲ ಅವರಿಗೆ ಸೇರುತ್ತೆ. ಕಳೆದ ಬಾರಿ ವಾರ್ಡ್ 1 ಸ್ಪರ್ಧಿಸಿ ಅಭೂತಪೂರ್ವ ಗೆಲುವು ತಮ್ಮದಾಗಿಸಿ ಅಧಿಕಾರ ಚುಕ್ಕಾಣಿ ಏರಿದ್ರು. ಬಹುಮತಗಳಿಂದ ಪಟ್ಟಣ ಪಂಚಾಯತ್ನ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಈ ಮೂಲಕ ವಿಟ್ಲದಲ್ಲಿ ಉತ್ತಮ ಜನಪ್ರತಿನಿಧಿಯಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಪುತ್ತೂರು ಗ್ರಾಮಾಂತರ ಮಂಡಲ ದ ಉಪಾಧ್ಯಕ್ಷರಾಗಿ ಹಾಗೂ ವಿಟ್ಲ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ.

ವಿಟ್ಲ ಪಟ್ಟಣ ಪಂಚಾಯತ್ನ ಅಧ್ಯಕ್ಷರಾಗಿ ಹಾಗೂ ಒಂದನೇ ವಾರ್ಡ್ನ ಜನಪ್ರತಿನಿಧಿಯಾಗಿ ಹಲವಾರು ಕೆಲಸಗಳನ್ನು ಮಾಡಿತೋರಿಸಿದ್ದಾರೆ. ಅರುಣ್ ವಿಟ್ಲ ಅವರ ಸಾಧನೆಗಳು: ನಿವೇಶನ, ರಸ್ತೆ, ನೀರಾವರಿ, ವಿದ್ಯುತ್, ಆರೋಗ್ಯ ಸುಧಾರಣೆ, ಸ್ವಚ್ಛತೆ, ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ಛಾಪು ಮೂಡಿಸಿದ್ದಾರೆ.


ಇವರ ಪ್ರಮುಖ ಸಾಧನೆಗಳು ಹೀಗಿದೆ. ಒಂದನೇ ವಾರ್ಡ್ನ ರಸ್ತೆಗಳ ಸಂಪೂರ್ಣವಾಗಿ ಕಾಂಕ್ರೀಟೀಕರಣ, ಬದನಾಜೆ ಸಂಪರ್ಕಕ್ಕೆ ಸೂಕ್ತವಾದ ರಸ್ತೆ ನಿರ್ಮಾಣ, ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಭ್ರಷ್ಟಚಾರ ಮುಕ್ತ ಆಡಳಿತ, ಸ್ವಚ್ಛತೆಗೆ ಹೆಚ್ಚು ಗಮನ ಸ್ವಚ್ಛ ವಿಟ್ಲಕ್ಕೆ ವಾಹನದ ವ್ಯವಸ್ಥೆ ಹೀಗೆ ಸಾಧನೆಯ ಪಟ್ಟಿ ಮುಂದುವರಿಯುತ್ತಾ ಹೋಗುತ್ತೆ..! ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಇವರು, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರೊಂದಿಗೆ ಪಕ್ಷದ ಕಾರ್ಯ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ತನ್ನ ವೈಯಕ್ತಿಕ ಹಾಗೂ ಸಹಮಿತ್ರರ ಸಹಾಯದಿಂದ 400ಕ್ಕೂ ಅಧಿಕ ಕಿಟ್ ವಿತರಣೆ, ಇವರ ನೇತೃತ್ವದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಶವಸಂಸ್ಕಾರ, ಅಧ್ಯಕ್ಷರಾಗಿದ್ದಾಗ ಘನ ತ್ಯಾಜ್ಯ ವಿಲೇವಾರಿ ಘಟಕ ಪಳಿಕೆಯನ್ನು ಸಂಪೂರ್ಣ ಸ್ವಚ್ಚಗೊಳಿಸಿ ಹೊಸ ಅಧ್ಯಾಯ ಬರೆದಿದ್ದಾರೆ. ವಿಟ್ಲದ ಐಬಿ ಬಳಿ 1 ಕೋಟಿ 20ಲಕ್ಷ ವೆಚ್ಚದ ನೀರಿನ ಟ್ಯಾಂಕ್ ಸಂಪೂರ್ಣ ನಡೆದಿದ್ದು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ನೀರು ಸರಬರಾಜು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿಯ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ವಾರ್ಡ್ 11 ರಿಂದ ಸ್ಪರ್ಧಿಸುತ್ತಿದ್ದಾರೆ. ಮತದಾನ ಬಾಂಧವರು ಇವ್ರ ಸಾಧನೆಗೆ ಬೆಂಬಲ ನೀಡಿ ಈ ಬಾರಿಯೂ ಕೈ ಹಿಡಿಯುತ್ತಾರೆ ಅನ್ನುವ ಅಛಲ ನಂಬಿಕೆಯಿದೆ. ಈ ಬಾರಿ ಬಿಜೆಪಿಯ ಪ್ರಣಾಳಿಕೆ ಪ್ಲಸ್ ಪಾಯಿಂಟ್ ಆಗಿದೆ. ಒಟ್ಟಿನಲ್ಲಿ ವಾರ್ಡ್ 11 ರಲ್ಲಿ ಕಮಲ ಅರಳಿ ಅಭಿವೃದ್ಧಿಯ ಅರುಣೋದಯಕ್ಕೆ ಮತದಾರರು ಒಲವು ತೋರಿಸುತ್ತಿದ್ದಾರೆ..!

