


ವಿಟ್ಲ: ಧರ್ಮ ಶಿಕ್ಷಣದಿಂದ ವಂಚಿತರಾಗಿದ್ದೇವೆ ಆದ್ದರಿಂದ ಇಂದಿನ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಅಗತ್ಯ ಇದೆ, ಬಿಲ್ಲವರು ಭಿನ್ನಾಭಿಪ್ರಾಯ ಬದಿಗೆ ಇಟ್ಟು ಸಂಘರ್ಷ ಇಲ್ಲದೆ ಒಟ್ಟಾಗಿರಬೇಕು ಎಂದು , ಪರಮಪೂಜ್ಯ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರ, ಕಣಿಯೂರು, ಇವರು ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಕುಳ ಗ್ರಾಮದ ಬಿಲ್ಲವ ಸಂಘ (ರಿ) ಕುಂಡಡ್ಕ ಇವರು ಕುಂಡಡ್ಕ ಗುರುನಗರ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ” ಇದರ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನನ ನೀಡಿ ಮಾತನಾಡಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜದ ಕಟ್ಟ ಕಡೆಯ ಮಗುವಿಗೂ ಶಿಕ್ಷಣ ದೊರೆಯಬೇಕು, ಸಮಾಜ ಕಟ್ಟುವಾಗ ಯಾವುದೇ ಯೋಜನೆ ಒಂದೇ ಸಮಾಜಕ್ಕೆ ಸೀಮಿತ ಮಾಡಲು ಆಗಲ್ಲ. ಸಾಮೂಹಿಕ ನ್ಯಾಯಕ್ಕೆ ಒತ್ತು ಕೊಡುವ ಅಗತ್ಯವಿದೆ. ಮುಂದಿನ ಬಜೆಟಿನಲ್ಲಿ ನಾರಾಯಣ ಗುರು ನಿಗಮ ಘೋಷಣೆ ಆಗಲಿದೆ ಎಂದು ತಿಳಿಸಿದರು.
ಕುಂಡಡ್ಕ ಬಿಲ್ಲವ ಸಂಘ (ರಿ.)ದ ಅಧ್ಯಕ್ಷ ದೂಮಪ್ಪ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ, ದೈವ ನರ್ತಕ ರಾಮಣ್ಣ ಕುಳ, ಸಭಾಭವನಕ್ಕೆ ಸ್ಥಳ ದಾನಿಗಳಾದ ಸಂಜೀವ ಪೂಜಾರಿ ದಂಪತಿಗಳನ್ನು, ಕಟ್ಟಡ ಸಮಿತಿಯ ಸಂಚಾಲಕ ಯತೀಶ್ ಪೂಜಾರಿ ದಂಪತಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮುರುವ ಮಾಣಿಲ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗೂರೂಜಿ, ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಸಂಜೀವ ಮಠಂದೂರು, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್, ಲಯನ್ಸ್ ಜಿಲ್ಲಾ ಪೂರ್ವ ರಾಜ್ಯಪಾಲರು ಲಯನ್ ಡಾ| ಗೀತಪ್ರಕಾಶ್ ಎ, ಡಾ. ರಾಜಾರಾಮ್ ಕೆ ಬಿ, ಮಾಜಿ ಅಧ್ಯಕ್ಷರು ಯುವ ವಾಹಿನಿ ಕೇಂದ್ರ ಸಮಿತಿ, ರಾಧಾಕೃಷ್ಣ ಪೈ, ಉದ್ಯಮಿ ವಿಟ್ಲ, ದ. ಕ, ಜಿಲ್ಲಾ ಮೂರ್ತೆದಾರರ ಮಹಾಮಂಡಲ ಅಧ್ಯಕ್ಷರು ಕೆ. ಸಂಜೀವ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ಚನ್ನಪ್ಪ ಗೌಡ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಜಿಲ್ಲಾಧಿಕಾರಿ ಸಚಿನ್ ಕುಮಾರ್ , ಲೋಕೇಶ್ ತಂತ್ರಿಗಳು, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ .ನಿ ವಿಟ್ಲ ಅಧ್ಯಕ್ಷರು, ಸಂಜೀವ ಪೂಜಾರಿ ನಿಡ್ಯ, ಕೃಷ್ಣ ಎಂ ಪೂಜಾರಿ, ಉದ್ಯಮಿ, ಮುಂಬಯಿ, ಸಂತೋಷ್ ಜೀವನ್, ಕ್ರಷರ್ ಉದ್ಯಮಿ ಮಾಡತ್ತಡ್ಕ, R.W.S. ಸಬ್ ಡಿವಿಷನ್ ಬಂಟ್ವಾಳ ಜೂನಿಯರ್ ಇಂಜಿನಿಯರ್ ಜಗದೀಶ್ ನಿಂಬಾಳ್ಕರ್, ಗ್ರಾಮ ಅಭಿವೃದ್ಧಿ ಯೋಜನೆ ಮೇಲ್ವಿಚಾರಕರು ಸರಿತಾ, ಯೋಜನೆಯ ವಿಟ್ಲ ವಲಯ ಅಧ್ಯಕ್ಷರು ಪ್ರಮೀಳ ಮೊದಲಾದವರು ಉಪಸ್ಥಿತರಿದ್ದರು.
ಜೀವನ್, ಕೌಶಿಕ್, ಭವಿಷ್ಯ ಪ್ರಾರ್ಥಿಸಿ, ನಾರಾಯಣ ಪೂಜಾರಿ ಎಸ್. ಕೆ. ಗೌರವಾಧ್ಯಕ್ಷರು, ಬಿಲ್ಲವ ಸಂಘ (ರಿ.) ಕುಂಡಡ್ಕ, ಸಂಘದ ಪ್ರಾಸ್ತಾವಿಕ ವರದಿಯನ್ನು ಯಾಚಿಸಿದರು, ಸಂಘದ ನಿಕಟಪೂರ್ವ ಅಧ್ಯಕ್ಷ ವಿಠಲ ಪೂಜಾರಿ ಕುಂಡಡ್ಕ ಸ್ವಾಗತಿಸಿ, ಸಂಘದ ಕೋಶಾಧಿಕಾರಿ ಕೆ ಟಿ ಆನಂದ ಧನ್ಯವಾದವಿತ್ತರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರ್ವಹಿಸಿದರು .