- Advertisement -
- Advertisement -
ವಿಟ್ಲ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ಮೂಡಬಿದ್ರೆಯಲ್ಲಿ ನಡೆದ 2022ನೇ ಸಾಲಿನ ರಾಜ್ಯ ಮಟ್ಟದ “ರಾಜ್ಯ ಪುರಸ್ಕಾರ” ಪರೀಕ್ಷೆಗೆ ಹಾಜರಾದ ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರೌಢ ಶಾಲೆ ಮತ್ತು ಕಾಲೇಜ್ ವಿಭಾಗದ 6 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿ 100% ಶೇಕಡಾ ಫಲಿತಾಂಶ ಪಡೆದುಕೊಂಡಿದ್ದಾರೆ.
ಸ್ಕೌಟ್ ಶಿಕ್ಷಕರಾದ ನಾರಾಯಣ ನಾಯಕ್ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಆಶ್ಲೇಷ್ ಪಿ.ಎಸ್, ಸುದರ್ಶನ್.ಎಸ್, ಭವಿಷ್.ಕೆ, ಜೆ.ಎಮ್. ಅಖಿಲೇಶ್, ಪ್ರಜ್ವಲ್ ನಾಯಕ್, ಆರೋನ್ ಅಲೋಶಿಯಸ್ ವ್ರಿಗಸ್ ಭಾಗವಹಿಸಿ ಶೇ.100% ಪಡೆದು ಉತ್ತೀರ್ಣರಾಗಿ ಅಳಿಕೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ದ.ಕ ಜಿಲ್ಲೆಯಲ್ಲಿ ಸ್ಕೌಟ್ ವಿಭಾಗದಲ್ಲಿ ಒಟ್ಟು 110 ವಿದ್ಯಾರ್ಥಿಗಳು ಮತ್ತು ಗೈಡ್ಸ್ ವಿಭಾಗದಲ್ಲಿ ಒಟ್ಟು 164ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಭಾಗವಹಿಸಿದ 274 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
- Advertisement -