- Advertisement -
- Advertisement -





ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಾಲೆತ್ತೂರು ಇದರ ಶಿಕ್ಷಕ ಮಹಮ್ಮದ್ ರಫೀಕ್ ಮಂಗಳಪದವು ಎಂಬಾತ ಶಾಲೆಯ ಶಿಕ್ಷಕನಾಗಿ ಶಾಲೆಯಲ್ಲಿ ವಿದ್ಯಾರ್ಥಿನಿಗಳಿಗೆ ಅಸಭ್ಯವಾಗಿ ಲೈಂಗಿಕ ವರ್ಣರಂಜಿತ ಟೀಕೆಗಳು ಹಾಗೂ ಅಸಭ್ಯ ಸಂದೇಶ ರವಾನೆ ಮಾಡಿದ ಹಿನ್ನಲೆಯಲ್ಲಿ ಪೋಷಕರಿಂದ ಶಾಲೆಯ ಅಭಿವೃದ್ದಿ ಮಂಡಳಿ ಹಾಗೂ ಪ್ರಾಂಶುಪಾಲರಿಗೆ ದೂರು ನೀಡಿದ ಹಿನ್ನಲೆಯಲ್ಲಿ, ಮೊಹಮ್ಮದ್ ರಫೀಕ್ ಎಂಬಾತ ಶಿಕ್ಷಕ ವೃತ್ತಿಗೆ ಕಳಂಕ ತಂದಿದುದರಿಂದ ಆತನನ್ನು ತಕ್ಷಣ ಶಾಲೆಯಿಂದ ಅಮನಾತು ಮಾಡಿ, ಶಿಕ್ಷಕ ವೃತ್ತಿಯಿಂದ ವಜಾ ಮಾಡಬೇಕು , ಮತ್ತು ಪೋಲಿಸ್ ಇಲಾಖೆ ತುರ್ತಾಗಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಮುಂದೆ ಆಗುಬಹುದಾದ ಅನಾಹುತವನ್ನು ತಪ್ಪಿಸುವಂತೆ ಸ್ಥಳಿಯ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಹಾಗೂ ಹಳೆ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ ಈ ಸಂದರ್ಭದಲ್ಲಿ ಹಿಂದೂ ಜಾಗರಣೆಯ ವೇದಿಕೆಯ ಪ್ರಮುಖರು ,ಕಾರ್ಯಕರ್ತರು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .
- Advertisement -








