Sunday, May 19, 2024
spot_imgspot_img
spot_imgspot_img

ವಿಟ್ಲ : (ಮಾ. 6) ಅನಂತಾಡಿ ಮೆಚ್ಚಿ ಜಾತ್ರೆಯ ಪ್ರಯುಕ್ತ ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ’ಸಂಗೀತ ಗಾನ ಸಂಭ್ರಮ’

- Advertisement -G L Acharya panikkar
- Advertisement -

ವಿಟ್ಲ : ಅನಂತಾಡಿ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿಜಾತ್ರೆಯು ಮಾ. 6 ಮತ್ತು 7 ರಂದು ನಡೆಯಲಿದ್ದು ಮಾ.6 ರಂದು ರಾತ್ರಿ ಭಂಡಾರಯೇರಿ ಮಾ. 7 ರಂದು ಅನಂತಾಡಿ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆ ನಡೆಯಲಿದೆ.

ಮಾ. 6 ರಂದು ರಾತ್ರಿ 7.30 ಕ್ಕೆ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಶ್ರೀ ಉಳ್ಳಾಲ್ತಿ ಭಕ್ತ ವೃಂದ, ಅನಂತಾಡಿ ಪ್ರಸ್ತುತ ಪಡಿಸುವ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ’ಸಂಗೀತ ಗಾನ ಸಂಭ್ರಮ’ ವು ಅನಂತಾಡಿ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ವಠಾರ, ಬಂಟ್ರಿಂಜ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪ್ರಬುದ್ಧ ಗಾಯಕಿ ಜನ್ಯಪ್ರಸಾದ್ ಅನಂತಾಡಿ, ಖ್ಯಾತ ಗಾಯಕಿ ಪಲ್ಲವಿ ಪ್ರಭು ಮಂಗಳೂರು, ನಿರೂಪಕ /ಗಾಯಕ ಕೃಷ್ಣಪ್ರಸಾದ್ ರಾವ್ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!