- Advertisement -
- Advertisement -
ವಿಟ್ಲ: ಹಲವು ವರ್ಷಗಳಿಂದ ಹೆಸರುವಾಸಿಯಾದ ಕಂಬಳಬೆಟ್ಟು ಮಸೀದಿಗೆ ಸಂಬಂಧಪಟ್ಟ ಮೊಯಿದ್ದೀನ್ ಇಬ್ರಾಹಿಂ ಜಮಾತ್ ಕಮಿಟಿ(ರಿ)ಯಿಂದ ರಫೀಕ್ ತಾತ್ಕಾಲಿಕವಾಗಿ ಹೊರಹಾಕಲಾಗಿರುವ ಘಟನೆ ನಡೆದಿದೆ.
ಇತ್ತೀಚೆಗೆ ಕಂಬಳಬೆಟ್ಟುವಿನ ಮುಸ್ಲಿಂ ಸಮುದಾಯದ ಯುವತಿಯೊಬ್ಬಳು ಪರಾರಿಯಾಗಿದ್ದು, ಆಕೆಯನ್ನು ಪೊಲೀಸರು ಪ್ರಿಯಕರನೊಂದಿಗೆ ಪತ್ತೆ ಮಾಡಿ ಠಾಣೆಗೆ ಕರೆತಂದಿದ್ದರು. ಈ ಪ್ರಕರಣದಲ್ಲಿ ರಫೀಕ್ ಎಂಬವನು ಯುವತಿಯ ಮನೆಯವರಿಗೆ ವಿಷಯ ತಿಳಿಸದೇ ಈ ಜೋಡಿ ತಪ್ಪು ದಾರಿಯಲ್ಲಿ ನಡೆಯುವಂತೆ ಪ್ರಚೋದನೆ ಮಾಡಿದ್ದು, ಇದಕ್ಕಿಂತ ಮುಂಚೆಯೂ ಈತ ಊರಿನ ಸಣ್ಣ ವಯಸ್ಸಿನ ಯುವಕರಿಗೆ ಇತರ ವಿಷಯದಲ್ಲಿ ದಾರಿ ತಪ್ಪುವಂತೆ ಬೆಂಬಲ ನೀಡಿದ್ದ ಎಂಬ ಆರೋಪ ಕೇಳಿಬಂದಿದೆ.
ಹಲವು ವರ್ಷಗಳಿಂದ ಸಮಾಜ ಸೇವೆಯಿಂದ ಹೆಸರುವಾಸಿಯಾಗಿದ್ದ ಕಮಿಟಿಯಲ್ಲಿ ಇಂತಹ ಮನೆಹಾಳು ಕೆಲಸ ಮಾಡಿದ ಸದಸ್ಯನನ್ನು ಸಂಘಟನೆಯಲ್ಲಿ ಇರಿಸುವುದು ಸರಿಯಲ್ಲ ಎಂದು ಊರಿನವರು ದೂರು ನೀಡಿದ ಬಳಿಕ ಕಮಿಟಿಯವರು ಖಚಿತ ಮಾಹಿತಿಯ ಮೇರೆಗೆ ಸದಸ್ಯ ರಫೀಕ್ನನ್ನು ಸಂಘಟನೆಯಿಂದ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
- Advertisement -