Saturday, April 20, 2024
spot_imgspot_img
spot_imgspot_img

ವಿಟ್ಲ: ಯುವತಿಯರಿಬ್ಬರು ನಾಪತ್ತೆ ಪ್ರಕರಣ; ನಾಪತ್ತೆಯಾದ ಯುವತಿಯರಿಬ್ಬರು ಪುತ್ತೂರಿನಲ್ಲಿ ಪತ್ತೆ

- Advertisement -G L Acharya panikkar
- Advertisement -

ವಿಟ್ಲ: ಕಾಡುಮಠದ ಬಾಡಿಗೆ ಮನೆ ನಿವಾಸಿ ಕುಳಾಲು ಆಟೋ ಚಾಲಕ ಮುಸ್ಲಿಂ ಸಮುದಾಯದವರ ಅಪ್ರಾಪ್ತ ಪುತ್ರಿ ಮನೆಯಲ್ಲಿ ಹೇಳದೆ ಸೋಮವಾರ ಬೆಳಗ್ಗಿನಿಂದ ನಿಗೂಢ ನಾಪತ್ತೆಯಾಗಿದ್ದಳು. ಸಂಜೆ ತನ್ನ ಕಾಸರಗೋಡಿನ ಗೆಳತಿಯೊಂದಿಗೆ ಮನೆಗೆ ಹಿಂದಿರುಗಿದಾಗ ಹೆತ್ತವರ ವಿಚಾರಣೆಗೆ ಕೋಪಗೊಂಡು ಯುವತಿ ಬಂದ ದಾರಿಗೆ ಸುಂಕವಿಲ್ಲದಂತೆ ಮತ್ತೆ ತನ್ನ ಗೆಳತಿಯೊಂದಿಗೆ ವಾಪಾಸ್‌ ಆಟೋ ಮೂಲಕ ವಿಟ್ಲದತ್ತ ಎಸ್ಕೇಪಾಗಿದ್ದರೆನ್ನಲಾಗಿದೆ.

ಈ ಸುದ್ದಿ ಬಯಲಾಗುತ್ತಿದ್ದಂತೆ ಕರೈ, ಕಾಡುಮಠ, ಸಾಲೆತ್ತೂರು ಪರಿಸರದ ಐವತ್ತಕ್ಕೂ ಹೆಚ್ಚು ಮುಸ್ಲಿಂ ಧರ್ಮರಕ್ಷಕ ಯುವಕರು ವಿಟ್ಲದಲ್ಲಿ ಸುತ್ತಾಡುತ್ತಾ ನಾಪತ್ತೆಯಾದ ಯುವತಿಯರ ಶೋಧ ನಡೆಸಿದ್ದಾರೆ. ಈ ಮಧ್ಯೆ ವಿಟ್ಲ ಪೇಟೆಯಲ್ಲಿ ಅವರಿಬ್ಬರನ್ನು ಹೋಲುವ ಇಬ್ಬರು ಮುಸ್ಲೀಂ ಯುವತಿಯರು ಕುದ್ದುಪದವು ಕಡೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದರು. ಇದೇ ಯುವತಿಯರು ನಾಪತ್ತೆಯಾದವರು ಎಂಬ ಅನುಮಾನಗೊಂಡ ಯುವಕರ ತಂಡ ಹಿಂದು ಮುಂದು ವಿಚಾರಿಸದೇ ಏಕಾಏಕಿ ಯುವತಿಯರ ಮೈಮೇಲೆ ಸಾರ್ವಜನಿಕವಾಗಿ ಅಸಭ್ಯವಾಗಿ ಕೈಹಾಕಿ ನಿಂದಿಸುತ್ತಾ ಮನಬಂದಂತೆ ಥಳಿಸಿ ರಾಕ್ಷಸೀ ಕೃತ್ಯ ಎಸಗಿದ್ದಾರೆ. ನಾವು ಮನೆಗೆ ತೆರಳಲು ಇಲ್ಲಿ ಬಸ್ಸಿಗಾಗಿ ಕಾಯುತ್ತಿರುವುದಾಗಿ ಎಷ್ಟೇ ತಿಳಿಸಿದರು ತಂಡ ಮಾತ್ರ ಅವರನ್ನು ಬಿಟ್ಟಿರಲಿಲ್ಲ.

ವಿಚಾರ ತಿಳಿದ ವಿಟ್ಲ ಠಾಣಾ ಪೊಲೀಸರು ಅಲ್ಲಿದ್ದವರ ಪೈಕಿ ಓರ್ವನನ್ನು ತಮ್ಮ ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ. ಹಲ್ಲೆಗೊಳಗಾದ ಇಬ್ಬರು ಬಾಲಕಿಯರು ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ.ಕಾಣೆಯಾಗಿದ್ದ ಬಾಲಕಿಯರಿಬ್ಬರು ಪುತ್ತೂರಿನ ಬಸ್‌ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ವಿಟ್ಲ ಠಾಣೆಗೆ ಕರೆಸಿ ಬುದ್ದಿವಾದ ಹೇಳಿ ಮನೆಯವರ ಜೊತೆ ಕಳುಹಿಸಿಕೊಡಲಾಗಿದೆ.

ಈ ಬಗ್ಗೆ ಠಾಣೆಯಲ್ಲಿ ಈ ಬಗ್ಗೆ ಯಾವುದೇ ಪ್ರ ಕರಣ ದಾಖಲಾಗಿಲ್ಲ ಎಂದುಪೊಲೀಸರು ತಿಳಿಸಿದ್ದಾರೆ.

ಕೊಳ್ನಾಡು ಕಾಡುಮಠದ ಆಟೋ ಚಾಲಕನ ಪುತ್ರಿ ನಾಪತ್ತೆ

vtv vitla
- Advertisement -

Related news

error: Content is protected !!