- Advertisement -
- Advertisement -
ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ 4ನೇ ವಾರ್ಡ್ ನ ಚಂದಳಿಕೆ ಶ್ರೀ ಕಲ್ಲುರ್ಟಿ ಗುಳಿಗ ಬನದ ಅಂಗಣಕ್ಕೆ ಶಾಸಕರ ಪ್ರದೇಶಾಭಿರುದ್ಧಿ ಅನುದಾನದಿಂದ ಬಿಡುಗಡೆಯಾದ ಸುಮಾರು 2 ಲಕ್ಷದ ಇಂಟರ್ಲಾಕ್ ನ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನಡೆಯಿತು.
ಗುದ್ದಲಿ ಪೂಜೆಯನ್ನು ಶ್ರೀ ಕಲ್ಲುರ್ಟಿ ಗುಳಿಗ ಬನದ ಆಡಳಿತ ಸಮಿತಿಯ ಪ್ರಮುಖರಾದ ಹರಿಗಣೇಶ್ ಚಂದಳಿಕೆ ಇವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಈ ಭಾಗದ ಪಟ್ಟಣ ಪಂಚಾಯತ್ ಸದಸ್ಯೆ ರಕ್ಷಿತಾ ಸನತ್ ಚಂದಳಿಕೆ ಮತ್ತು ಬಿಜೆಪಿ ಪಕ್ಷದ ಪ್ರಮುಖರಾದ ಲೋಕನಾಥ ಶೆಟ್ಟಿ ಕೊಲ್ಯ, ನರ್ಸಪ್ಪ ಪೂಜಾರಿ ಪರನೀರು, ತಿರುಮಲೇಶ್ವರ ಗೌಡ ನಿಡ್ಯ, ಮಹೇಶ್ ಭಂಡಾರಿ ಕಲ್ಲಕಟ್ಟ, ಸುಶಾಂತ್ ಚಂದಳಿಕೆ ಮತ್ತು ಕಲ್ಲುರ್ಟಿ ಗುಳಿಗ ಬನದ ಆಡಳಿತ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
- Advertisement -