Saturday, June 28, 2025
spot_imgspot_img
spot_imgspot_img

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ.) ಇದರ ವತಿಯಿಂದ “ಆಟಿಡ್‌ ಕೆಸರಡೊಂಜಿ ದಿನ “

- Advertisement -
- Advertisement -

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ.) ಇದರ ವತಿಯಿಂದ ತುಳುನಾಡ ಜಾನಪದ ಕ್ರೀಡೆ ಮತ್ತು ಆಚರಣೆಗಳನ್ನು ನೆನಪಿಸುವ ಸಲುವಾಗಿ ಮತ್ತು ಯುವಜನತೆಯ ಮನಸ್ಸುಗಳನ್ನು ದೇಶ ಭಾಷೆಗಳೊಂದಿಗೆ ಒಗ್ಗೂಡಿಸುವ ಸಲುವಾಗಿ ಆಟಿಡ್ ಕೆಸರಡೊಂಜಿ ದಿನವನ್ನು ಹಮ್ಮಿಕೊಂಡಿದೆ.

ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ.) ವಿಷ್ಣುನಗರ-ಕುಂಡಡ್ಕ, ಕುಳ-ವಿಟ್ಲಮುಡ್ನೂರು, ಬಂಟ್ವಾಳ ತಾಲೂಕು ದ.ಕ.ಇದರ ವತಿಯಿಂದ “ಆಟಿಡ್‌ ಕೆಸರೊಂಜಿ ದಿನ” ಕಾರ್ಯಕ್ರಮವು ದಿನಾಂಕ 07-08-2022ನೇ ಆದಿತ್ಯವಾರ ಕುಳ ಗುಣಶ್ರೀ ಶಾಲೆಯ ಹತ್ತಿರ, ನಾಗೇಶ್ ಪಾದೆಯವರ ಗದ್ದೆಯಲ್ಲಿ ನಡೆಯಲಿದೆ.

ಬೆಳಗ್ಗೆ ಗಂಟೆ 9.00ಕ್ಕೆ ಉದ್ಘಾಟನಾ ಸಮಾರಂಭವನ್ನು ವಿಟ್ಲ ಅರಮನೆ ಕೃಷ್ಣಯ್ಯ ಕೆ. ಉದ್ಘಾಟಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಆಡಳಿತ ಸಮಿತಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಧ್ಯಕ್ಷರು ದಯಾನಂದ ಶೆಟ್ಟಿ ಉಜಿರೆಮಾರ್‌ ವಹಿಸಲಿದ್ದಾರೆ. ಅತಿಥಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಡ್ಕಿದು ಗ್ರಾಮಪಂಚಾಯತ್ ಗೋಕುಲ್‌ ದಾಸ್ ಭಕ್ತ, ದ.ಕ ಚೇನು ಸಾಕಾಣಿಕಾ ಸಹಕಾರಿ ಸಂಘದ ಉಪಾಧ್ಯಕ್ಷರು ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಪುತ್ತೂರು ಪ್ರಾಚಾರ್ಯರು ನಾರಾಯಣ ಪೂಜಾರಿ ಪಿಲಿಂಜ, ಕುಂಡಡ್ಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ತೀರ್ಥರಾಮ ಸೇನರೆಮಜಲು, ಇಡ್ಕಿದು ಗ್ರಾಮ ಪಂಚಾಯತ್‌ ಸದಸ್ಯರಾದ ಚಿದಾನಂದ ಪೆಲತ್ತಿಂಜ, ಸಾಯಿ ಟೌನ್‌ ಕಿಚನ್‌ ವಿಟ್ಲ ಮಾಲಕ ದಿವಾಕರ ಶೆಟ್ಟಿ ಅಬೀರಿ, ಯುವಕೇಸರಿ ಅಬೀರಿ ಅಧ್ಯಕ್ಷ ಚಿದಾನಂದ ಶೆಟ್ಟಿ ಉಜಿರೆಮಾರು, ಪ್ರಗತಿಪರ ಕೃಷಿಕ ಪದ್ಮನಾಭ ಶೆಟ್ಟಿ ಚಪ್ಪುಡಿಯಡ್ಕ, ಅಡ್ಯಾಲು ಶಾಖೆ ಇಡ್ಕಿದು ಸೇವಾ ಸಹಕಾರಿ ಸಂಘದ ಶಾಖಾಧಿಕಾರಿ ನಾಗೇಶ ಪಾದೆ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಸಮಾರೋಪ ಸಮಾರಂಭ ಕಾರ್ಯಕ್ರಮವು ಸಂಜೆ 5.00 ಗಂಟೆಗೆ ನಡೆಯಲಿದೆ. ಅತಿಥಿಗಳಾಗಿ ಕೇಶವ ಪಾಂಡೇಲು ಪ್ರಗತಿಪರ ಕೃಷಿಕರು, ಉಮೇಶ್‌ ಅರ್ಕಲ್ತೋಟ ಸದಸ್ಯರು ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌, ಚೇತನ್‌ ಮರುವಾಳ, ಲಿಂಗಪ್ಪ ಗೌಡ ಅರ್ಕಲ್ತೋಟ ಭಾಗವಹಿಸಲಿದ್ದಾರೆ.

ಆಟೋಟ ಸ್ಪರ್ಧೆಗಳು

ಸಾರ್ವಜನಿಕರಿಗೆ ನಿಧಿಶೋಧ ಆಟ, ಮಕ್ಕಳಿಗೆ, ಸ್ಥಳದಲ್ಲೇ ವಿವಿಧ ಆಟೋಟ ಸ್ಪರ್ಧೆಗಳು, ಪುರುಷರಿಗೆ, ಕಬ್ಬಡಿ, ಹಗ್ಗಜಗ್ಗಾಟ, ವಾಲಿಬಾಲ್‌, ಮಹಿಳೆಯರಿಗೆ ಹಗ್ಗಾಜಗ್ಗಾಟ, ತ್ರೋಬಾಲ್‌, ವಿವಿಧ ಆಟೋಟ ಸ್ಫರ್ಧೆಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!