Sunday, May 19, 2024
spot_imgspot_img
spot_imgspot_img

ವಿಟ್ಲ: “ಸಹೋದರ ಸೇವಾನಿಧಿಯ ಸೇವಾಕಾರ್ಯ” ಕಣ್ಣಿನ ಶಸ್ತ್ರಚಿಕಿತ್ಸೆಗೆ ಹಾಗೂ ವಿದ್ಯಾಭ್ಯಾಸಕ್ಕೆ ಸಹಾಯ

- Advertisement -G L Acharya panikkar
- Advertisement -

ವಿಟ್ಲ: ಸಹೋದರ ಸೇವಾನಿಧಿಯ ಸೇವಾಕಾರ್ಯದ ಪ್ರಯುಕ್ತ ಸಾಲೆತ್ತೂರು ಗ್ರಾಮದ ಬೊಳ್ಮಾರು ನಿವಾಸಿ ಶರತ್ ರವರ ಕಣ್ಣಿನ ಶಸ್ತ್ರಚಿಕಿತ್ಸೆಗೆ ಧನಸಹಾಯ ಮತ್ತು ಕೊಳ್ನಾಡು ಗ್ರಾಮದ ಪರ್ತಿಪ್ಪಾಡಿ ನಿವಾಸಿ ಪ್ರವೀಣ್ ರವರಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸ್ಮಾರ್ಟ್ ಫೋನ್ ನೀಡಲಾಯಿತು.

ಶರತ್ ಮನೆಯಲ್ಲಿ ತಾಯಿ ಮಗ ಇಬ್ಬರೇ ಇದ್ದು, ತಾಯಿಗೆ ದುಡಿಯಲು ಅರೋಗ್ಯ ಸರಿ ಇಲ್ಲ ಹೀಗಾಗಿ ಇವರ ಕಣ್ಣಿನ ಶಸ್ತ್ರಚಿಕಿತ್ಸೆಗೆ ಧನಸಹಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರಾದ ಚಂದ್ರಶೇಖರ ಮತ್ತು ಪ್ರಸಾದ್ ಹಾಗೂ ಮಂಕುಡೆಯ ಶಿವಾಜಿ ಪ್ರೆಂಡ್ಸ್ ನ ಮನೀಶ್ ಅಮೀನ್ ಉಪಸ್ಥಿತರಿದ್ದರು.

ಅಲ್ಲದೆ ಪ್ರವೀಣ್ ಹಾಗೂ ಅವರ ಸಹೋದರಿಯ ವಿದ್ಯಾಭ್ಯಾಸದ ಎಲ್ಲಾ ವ್ಯವಸ್ಥೆಮಾಡಲು ಸಹಕರಿಸಿದ ಶಿವಾಜಿ ಪ್ರೆಂಡ್ಸ್ ನ ಪದಾಧಿಕಾರಿಗಳಿಗೆ, ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಲಾಯಿತು. ಈ ಕಾರ್ಯದಲ್ಲಿ ಸಹೋದರ ಜನಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.

- Advertisement -

Related news

error: Content is protected !!