Friday, May 3, 2024
spot_imgspot_img
spot_imgspot_img

ವಿಠಲ ಸುಪ್ರಜಿತ್ ಐಟಿಐ ವಿದ್ಯಾರ್ಥಿಗಳೊಂದಿಗೆ ಅಜಿತ್ ಕುಮಾರ್ ರೈ ಸಂವಾದ

- Advertisement -G L Acharya panikkar
- Advertisement -

ವಿಟ್ಲ: ಸುಪ್ರಜಿತ್ ಫೌಂಡೇಶನ್‌ ಬೆಂಗಳೂರು ಇದರ ಸ್ಥಾಪಕಾಧ್ಯಕ್ಷರು ಹಾಗೂ ವಿಠಲ ಸುಪ್ರಜಿತ್ ಐಟಿಐನ ಗೌರವಾಧ್ಯಕ್ಷ ಅಜಿತ್ ಕುಮಾರ್ ರೈ ಇವರು ಇಂದು ವಿಠಲ ವಿದ್ಯಾಸಂಸ್ಥೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ವಿಠಲ ಸುಪ್ರಜಿತ್ ಐಟಿಐನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಈ ಸಂವಾದ ಕಾರ್ಯಕ್ರಮದ ಸಂದರ್ಭ ಸುಪ್ರಜಿತ್ ಐಟಿಐನ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು, ಉಚಿತ ಸಮವಸ್ತ್ರ ಹಾಗೂ ವಿದ್ಯಾರ್ಥಿವೇತನ ಕೊಡುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ವಿಠಲ ವಿದ್ಯಾಸಂಸ್ಥೆಯ ಸಂಚಾಲಕ ಎಲ್ ಎನ್ ಕೂಡೂರು, ಸದಸ್ಯ ನಿತ್ಯಾನಂದ ನಾಯಕ್, ವಿಠಲ ಸುಪ್ರಜಿತ್ ಐಟಿಐನ ಸಂಚಾಲಕ ಆಲ್ಫಾನ್ಸೋ ಸಿಲ್ವೆಸ್ಟರ್ ಮಸ್ಕರೇನ್ಹಸ್, ಕಾರ್ಯದರ್ಶಿಗಳಾದ ಪ್ರಕಾಶ್, ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ, ಕಾಲೇಜಿನ ಪ್ರಾಂಶುಪಾಲ ಆದರ್ಶ್ ಎ ಎಸ್, ಐಟಿಐ ಪ್ರಾಂಶುಪಾಲ ರಮೇಶ್ ರೈ, ಸುಪ್ರಜಿತ್ ಐಟಿಐನ ಕಿರಿಯ ತರಬೇತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ರಮೇಶ್ ರೈ ಸ್ವಾಗತಿಸಿ, ನಳಿನಿ ವಂದಿಸಿದರು.

- Advertisement -

Related news

error: Content is protected !!