Friday, July 11, 2025
spot_imgspot_img
spot_imgspot_img

ವಿವೇಕಾನಂದ ತಕ್ಷಶಿಲಾ ಬಾಲಕರ ವಸತಿ ನಿಲಯದಲ್ಲಿ ಭಾರತ ಮಾತಾ ಪೂಜಾ ಮತ್ತು ಬೆಳದಿಂಗಳ ಭೋಜನ ಕಾರ್ಯಕ್ರಮ

- Advertisement -
- Advertisement -

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಪ್ರವರ್ತಿತ ವಿವೇಕಾನಂದ ತಕ್ಷಶಿಲಾ ಬಾಲಕರ ವಸತಿನಿಲಯದಲ್ಲಿ ಭಾರತ ಮಾತಾ ಪೂಜಾ ಮತ್ತು ಬೆಳದಿಂಗಳ ಭೋಜನ ಕಾರ್ಯಕ್ರಮಗಳು ನಡೆದವು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಕೋಶಾಧಿಕಾರಿ ಅಚ್ಯುತ ನಾಯಕ್ ಮಾತನಾಡಿ ಭಾರತ ದೇಶ ನಮಗೆ ಹೆಮ್ಮೆ. ದೇಶದ ವೈಜ್ಞಾನಿಕ ಹಿನ್ನೆಲೆ, ದೇಶದ ಜನಪದ, ಆಯುರ್ವೇದ, ಭಾಷೆ, ವಾಸ್ತುಶಿಲ್ಪ ಮತ್ತು ಜ್ಞಾನ ಅಗಾಧವಾದುದು. ಇದನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.

vtv vitla
vtv vitla

ಸಭೆಯ ಅಧ್ಯಕ್ಷತೆಯನ್ನು ವಿವೇಕಾನಂದ ವಸತಿ ನಿಲಯಗಳ ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್ ಪ್ರಭು ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ವಿವೇಕಾನಂದ ವಸತಿ ನಿಲಯಗಳ ಆಡಳಿತ ಮಂಡಳಿಯ ಕಾರ್ಯದರ್ಶಿ ಶಿವಕುಮಾರ್ ಪಿ ಬಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮುಖ್ಯ ನಿಲಯ ಪಾಲಕರಾದ ಗೋವಿಂದರಾಜ ಶರ್ಮ, ಆಡಳಿತಾಧಿಕಾರಿ ಲಕ್ಷ್ಮಿ ಪ್ರಸಾದ್, ಆಡಳಿತ ಮಂಡಳಿಯ ಸದಸ್ಯರುಗಳು, ಸಿಬ್ಬಂದಿ ವೃಂದದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಸತಿ ನಿಲಯದ ವಿದ್ಯಾರ್ಥಿ ಅಭಿರಾಮ್ ಭಟ್ ಎಂ ನಿರೂಪಿಸಿದರು. ವಿದ್ಯಾರ್ಥಿ ಶ್ರೀಹರ್ಷ ಸ್ವಾಗತಿಸಿ ಪ್ರಣಾಮ್ ವಂದನಾರ್ಪಣೆಗೈದರು. ಇದೇ ಸಂದರ್ಭದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳಿಕ ವಿವಿಧ ರೀತಿಯ ಭಕ್ಷ್ಯಗಳನ್ನು ಒಳಗೊಂಡ ಬೆಳದಿಂಗಳ ಭೋಜನವು ನಡೆಯಿತು.

- Advertisement -

Related news

error: Content is protected !!