- Advertisement -
- Advertisement -


ಶಿವಮೊಗ್ಗ: ಚಿನ್ನಾಭರಣ ವ್ಯಾಪಾರಿಯೊಬ್ಬರು ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಸಿದ್ದಯ್ಯ ರಸ್ತೆಯ ಕಾಡುವೀರಪ್ಪ ಕಂಪೌಂಡ್ ನಿವಾಸಿ ಕೃಷ್ಣಕುಮಾರ ಕುರ್ಡೇಕರ್ (41) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಕೃಷ್ಣಕುಮಾರ ಕುರ್ಡೇಕರ್ 18 ವರ್ಷಗಳಿಂದ ಚಿನ್ನ, ಬೆಳ್ಳಿ ವ್ಯಾಪಾರ ನಡೆಸುತ್ತಿದ್ದರು. ಹಲವು ದಿನಗಳಿಂದ ಪ್ರಶಾಂತ್ ಮೋರೆ ಹಾಗೂ ಗಣೇಶ್ ಎಂಬವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್ ನೋಟಿನಲ್ಲಿ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
- Advertisement -