- Advertisement -
- Advertisement -
ಸವಣೂರು: ಕೊರೊನಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಯುವಕನೋರ್ವನ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.
ಕಡಬ ತಾಲೂಕಿನ ಸವಣೂರು ಗ್ರಾಮದ ಪಣೆಮಜಲು ಎಂಬಲ್ಲಿ ಕೋವಿಡ್ -19 ಕರ್ತವ್ಯದಲ್ಲಿದ್ದ ಆರೋಗ್ಯ ಇಲಾಖೆಯವರು ,ಪಂಚಾಯತ್ ಪಿಡಿಒ, ಆಶಾಕಾರ್ಯಕರ್ತೆರು, ಗ್ರಾಮ ಪಂಚಾಯತ್ ಸದಸ್ಯರಿಗೆ ಮೇಘರಾಜ ಎಂಬ ಯುವಕ ಬೈದು, ಇಲ್ಲಿಯ ಜನರನ್ನು ಯಾಕೆ ಕ್ವಾರಂಟೈನ್ ಮಾಡುತ್ತೀರಿ. ನೀವು ಇಲ್ಲಿ ಬಂದು ರೋಗ ತಡೆಗಟ್ಟುವ ಅಗತ್ಯವಿಲ್ಲ ಎಂದು ಹೇಳಿರುವುದಾಗಿ ಆರೋಪಿಸಲಾಗಿದೆ.
ಈ ವಿಚಾರವಾಗಿ ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸವಣೂರು ಉಪಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ವಾಗೇಶ್ವರಿ ಅವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
- Advertisement -