Sunday, June 29, 2025
spot_imgspot_img
spot_imgspot_img

ಸುಳ್ಯ: ಅಡಿಕೆ ಹೆಕ್ಕುತ್ತಿದ್ದಾಗ ತೆಂಗಿನ ಮರ ಮೈಮೇಲೆ ಬಿದ್ದು ಮಹಿಳೆ ಗಂಭೀರ

- Advertisement -
- Advertisement -

ಸುಳ್ಯ: ತೆಂಗಿನ ಮರ ಮೈಮೇಲೆ ಬಿದ್ದು ಮಹಿಳೆ ಗಂಭೀರ ಗಾಯಗೊಂಡ ಘಟನೆ ಸುಳ್ಯದ ಅರಂತೋಡಿನಲ್ಲಿ ನಡೆದಿದೆ.

ಅರಂತೋಡು ಉಳುವಾರು ಮೇದಪ್ಪ ಗೌಡ ಎಂಬವರ ತೋಟದಲ್ಲಿ ಕೊಡಂಕಿರಿಯ ಬಾಲಣ್ಣ ಎಂಬವರ ಪತ್ನಿ ಕಮಲ ಅಡಿಕೆ ಹೆಕ್ಕುತ್ತಿದ್ದಾಗ ಒಣಗಿದ ತೆಂಗಿನ ಮರವೊಂದು ಮೈಮೇಲೆ ಬಿದ್ದು, ಗಂಭೀರ ಗಾಯವಾಗಿದೆ ಎನ್ನಲಾಗಿದೆ.

ಕೂಡಲೇ ಸ್ಥಳದಲ್ಲಿದ್ದವರು ಗಾಯಾಳು ಮಹಿಳೆಯನ್ನು ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ವಾಪಾಸ್ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!