Friday, June 27, 2025
spot_imgspot_img
spot_imgspot_img

ಸುಳ್ಯ: ತೆಂಗಿನಮರ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವು

- Advertisement -
- Advertisement -

ಸುಳ್ಯ: ತೆಂಗಿನಮರ ಬಿದ್ದು ಗಾಯಗೊಂಡಿದ್ದ ಅರಂತೋಡಿನ ಮಹಿಳೆ ಮೃತಪಟ್ಟ ಘಟನೆ ವರದಿಯಾಗಿದೆ. ಸುಳ್ಯದ ಅರಂತೋಡುವಿನ ಬಾಲಣ್ಣರವರ ಪತ್ನಿ ಕಮಲ (62 ವ) ಎಂಬವರು ಮೃತಪಟ್ಟರು.

ಉಳುವಾರು ಮೇದಪ್ಪ ಗೌಡರ ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದಾಗ ಒಣಗಿದ ತೆಂಗಿನ ಮರವೊಂದು ಕಮಲರವರ ಮೇಲೆ ಬಿದ್ದು ಗಂಭೀರ ಗಾಯಗಳಾಗಿತ್ತು, ಕೂಡಲೇ ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಕ.ವಿ.ಜಿ. ಆಸ್ಪತ್ರೆಗೆ ಕರೆತಂದಿದ್ದರು.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವಾಪಾಸ್ ಸುಳ್ಯದ ಕವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರೆಂದು ತಿಳಿದು ಬಂದಿದೆ. ಮೃತರು ಪುತ್ರ ಚಿದಾನಂದ, ಪುತ್ರಿ ತಾರಾಮಣಿ ಹಾಗೂ ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.

- Advertisement -

Related news

error: Content is protected !!