- Advertisement -
- Advertisement -
ಸುಳ್ಯ : ಮನೆಯ ಮೇಲೆ ಮರ ಬಿದ್ದ ಕಾರಣ ಮನೆಯಲ್ಲಿ ಮಲಗಿದ್ದ ಜನರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ನಡೆದಿದೆ.
ಕೇರ್ಪಡ ಪಲ್ಲತಡ್ಕ ನಿವಾಸಿ ಹಾಗೂ ಮೊಗೇರ್ಕಳ ಸೇವಾ ಸಮಿತಿ ಅಧ್ಯ ಕ್ಷ ರಮೇಶ್ ಅವರ ಮನೆಗೆ ತಡರಾತ್ರಿ ಮರ ಬಿದ್ದಿದ್ದು, ಮನೆಯ ಹಂಚುಗಳು ಪಕಾಸು, ರೀಪ್ ತುಂಡಾಗಿ ಅಪಾರ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಮರ ಬಿದ್ದ ಪರಿಣಾಮ ಮನೆ ಮೇಲ್ಛಾವಣಿಯ ಹಂಚು ಮನೆಯಲ್ಲಿದ್ದವರ ತಲೆಗೆ ಬಿದ್ದು ಗಾಯಗಳಾಗಿದೆ. ತಕ್ಷಣ ಗಾಯಾಳುಗಳನ್ನು ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -