Monday, June 30, 2025
spot_imgspot_img
spot_imgspot_img

ಹಳೆಯ ವಾಹನ ಮಾಲೀಕರಿಗೆ ಶಾಕಿಂಗ್‌ ನ್ಯೂಸ್‌; ಕರ್ನಾಟಕದಲ್ಲೂ ವಾಹನಗಳ ಗುಜರಿ ನೀತಿ ಜಾರಿಗೆ ಸಿದ್ಧತೆ

- Advertisement -
- Advertisement -

ಬೆಂಗಳೂರು: ಈಗಾಗಲೇ ಕೇಂದ್ರ ಸರ್ಕಾರ ಹಳೆಯ ವಾಹನಗಳ ಗುಜರಿ ನೀತಿಯನ್ನು ಜಾರಿಗೊಳಿಸಿದೆ. ಈ ನಿಯಮವನ್ನು ಈಗಾಗಲೇ ದೇಶದ ಹಲವು ರಾಜ್ಯಗಳು ಜಾರಿಗೊಳಿಸಿವೆ. ಇದೀಗ ಕರ್ನಾಟಕದಲ್ಲೂ ಗುಜರಿ ನೀತಿಯನ್ನು ಜಾರಿಗೊಳಸಲು ಸಿದ್ದತೆ ನಡೆಸಲಾಗಿದೆ.

ಕರ್ನಾಟಕದಲ್ಲೂ ಗುಜರಿ ನೀತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ಸಾರಿಗೆ ಇಲಾಖೆಯಿಂದ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಅನುಮೊದನೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾಲಿನ್ಯ ಮತ್ತು ಅಪಘಾತಗಳನ್ನು ಕಡಿಮೆ ಮಾಡುವ ಸಲುವಾಗಿ ಹಳೆಯ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕುವ ಗುರಿಯನ್ನು ಹೊಂದಿರುವ ಹೊಸ ವಾಹನ ಗುಜರಿ ನೀತಿಯನ್ನು ಕಳೆದ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಸ್ಕ್ರ್ಯಾಪೇಜ್ ನೀತಿಯ ಅಡಿಯಲ್ಲಿ, ವಾಹನ ಮಾಲೀಕರು 15 ವರ್ಷಗಳ ನಂತರ ನೋಂದಣಿ ಮುಗಿದ ನಂತರ ತಮ್ಮ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಸಾಧ್ಯವಾಗುತ್ತದೆ. ಆದಾಗ್ಯೂ, ದೆಹಲಿಯಲ್ಲಿ, ಡೀಸೆಲ್ಗೆ 10 ವರ್ಷಗಳ ನಂತರ ಮತ್ತು ಪೆಟ್ರೋಲ್ ವಾಹನಗಳಿಗೆ 15 ವರ್ಷಗಳ ನಂತರ ನೋಂದಣಿ ಕೊನೆಗೊಳ್ಳುತ್ತದೆ.

astr
- Advertisement -

Related news

error: Content is protected !!