Saturday, June 28, 2025
spot_imgspot_img
spot_imgspot_img

ವಿಟ್ಲ: ರಿಪೇರಿಗಾಗಿ ಮನೆಯಲ್ಲಿ ದಾಸ್ತಾನಿರಿಸಿದ್ದ 16 ಬೋರ್ ವೆಲ್ ಪಂಪ್‌ಗಳು ಕಳವು ಪ್ರಕರಣ : ಓರ್ವ ಅರೆಸ್ಟ್‌: ಇಬ್ಬರು ಪರಾರಿ

- Advertisement -
- Advertisement -

ವಿಟ್ಲ ಸಮೀಪದ ಪುಣಚ ನಿವಾಸಿ ಗಣೇಶ ಗೌಡ (49) ಅವರ ಮನೆಯಲ್ಲಿ ಜುಲೈ 21 ರ ರಾತ್ರಿಯಿಂದ 22 ರ ಬೆಳಗ್ಗಿನ ಮಧ್ಯದ ಅವಧಿಯಲ್ಲಿರಿಪೇರಿಗಾಗಿ ಸಾರ್ವಜನಿಕರಿಂದ ಪಡೆದು ಮನೆಯಲ್ಲಿ ದಾಸ್ತಾನಿರಿಸಿದ್ದ 16 ಬೋರ್ ವೆಲ್ ಪಂಪ್ ಗಳನ್ನು ಕಳವುಗೈದ ಘಟನೆ ನಡೆದಿದ್ದು, ಇದೀಗ ವಿಟ್ಲ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಕಡಬ ತಾಲೂಕು , ಕೋಚಕಟ್ಟೆ ನಿವಾಸಿ ಮಹಮ್ಮದ್ ಶಾಕೀರ್ ಬಂಧಿತ.

ಗಣೇಶ ಗೌಡ ಎಂಬವರು ತನ್ನ ಮನೆಯ ಬಳಿಯಿರುವ ಕಟ್ಟಡದಲ್ಲಿ, ರಿಪೇರಿಗಾಗಿ ಸಾರ್ವಜನಿಕರಿಂದ ಪಡೆದು ಇರಿಸಿದ್ದ ಒಟ್ಟು 16 ಬೋರ್‌ವೆಲ್ ಪಂಪ್‌ ಗಳು ಕಳುವಾಗಿದ್ದು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 119/2024, ಕಲಂ: 303 (2) BNS ರಂತೆ ಪ್ರಕರಣ ದಾಖಲಾಗಿರುತ್ತದೆ., ಈ ಪ್ರಕರಣದ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡಿದ್ದು, ಆ.14 ರಂದು ಆರೋಪಿಯನ್ನು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ರೂ 1,81,000/- ರೂ ಮೌಲ್ಯದ 16 ಬೊರವೆಲ್ ಪಂಪ್ ಗಳು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ವಾಹನ -01 ಇದರ ಅಂದಾಜು ಮೌಲ್ಯ 2,00,000/- ರೂ ಆಗಿದ್ದು, ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡು ಸೊತ್ತುಗಳ ಒಟ್ಟು ಮೌಲ್ಯ- 3,81,000/- ರೂ ಆಗಬಹುದಾಗಿದೆ.
ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಪರಾರಿಯಾಗಿರುತ್ತಾರೆ.

ಆರೋಪಿ ಪತ್ತೆಯ ಕಾರ್ಯಾಚರಣೆಯಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯ ಪ್ರಸಾದ್ ರವರ ಮಾರ್ಗದರ್ಶನದಂತೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ನಾಗರಾಜ್ ಹೆಚ್ ಈ ರವರ ನಿರ್ದೇಶನದಂತೆ, ಪೊಲೀಸ್ ಉಪ ನಿರೀಕ್ಷಕರಾದ ರತ್ನಕುಮಾ‌ರ್ ಎಂ ನೇತ್ರತ್ವದಲ್ಲಿ ಸಿಬ್ಬಂಧಿಗಳಾದ ಉದಯ ರೈ, ರಾಧಾಕೃಷ್ಣ ಕರುಣಾಕರ, ಶ್ರೀಧರ್ ಸಿ ಎಸ್, ಶಂಕರ ಸಂಶಿ, ಗದಿಗಪ್ಪ, ಮನೋಜ್, ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್ ಭಾಗವಹಿಸಿರುತ್ತಾರೆ.

ಆರೋಪಿ ಪತ್ತೆಯ ಕಾರ್ಯಾಚರಣೆಯಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯ ಪ್ರಸಾದ್ ರವರ ಮಾರ್ಗದರ್ಶನದಂತೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ನಾಗರಾಜ್ ಹೆಚ್ ಈ ರವರ ನಿರ್ದೇಶನದಂತೆ, ಪೊಲೀಸ್ ಉಪ ನಿರೀಕ್ಷಕರಾದ ರತ್ನ ಕುಮಾ‌ರ್ ಎಂ ನೇತ್ರತ್ವದಲ್ಲಿ ಸಿಬ್ಬಂಧಿಗಳಾದ ಉದಯ ರೈ, ರಾಧಾಕೃಷ್ಣ ಕರುಣಾಕರ, ಶ್ರೀಧರ್ ಸಿ ಎಸ್, ಶಂಕರ ಸಂಶಿ, ಗದಿಗಪ್ಪ, ಮನೋಜ್, ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್ ಭಾಗವಹಿಸಿರುತ್ತಾರೆ.

- Advertisement -

Related news

error: Content is protected !!