Sunday, June 29, 2025
spot_imgspot_img
spot_imgspot_img

4 ವರ್ಷದ ಬಾಲಕನಿಗೆ ಚೂರಿಯಿಂದ ಇರಿದು ಕೊಲೆ; ತಡೆಯಲು ಹೋದ ತಾಯಿಗೂ ಮಾರಣಾಂತಿಕ ಹಲ್ಲೆ

- Advertisement -
- Advertisement -

ನಾಲ್ಕು ವರ್ಷದ ಬಾಲಕನನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ವಯನಾಡಿನ ಮೆಪ್ಪಾಡಿಯಲ್ಲಿ ನಡೆದಿದೆ.

ಮೆಪ್ಪಾಡಿ ನೆಡುಂಬಳ ಪರೈಕ್ಕಲ್ ನಿವಾಸಿ ಜಯಪ್ರಕಾಶ್ ಅವರ ಪುತ್ರ ಆದಿದೇವ್ ಗೆ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.

ಗುರುವಾರ ಬೆಳಗ್ಗೆ ಒಂಬತ್ತು ಗಂಟೆಗೆ ನೆರೆಮನೆಯ ಜಿತೇಶ್ ಎಂಬಾತ ಜಯಪ್ರಕಾಶ್ ಪತ್ನಿ ಅನಿಲಾ ಮತ್ತು ಮಗ ಆದಿದೇವ್ ಮೇಲೆ‌ ಚೂರಿಯಿಂದ ಮಾರಣಾಂತಿಕವಾಗಿ ಇರಿದಿದ್ದಾರೆ. ಅನಿಲಾ ತನ್ನ ಮಗುವಿನೊಂದಿಗೆ ಅಂಗನವಾಡಿಗೆ ಹೋಗುತ್ತಿದ್ದಾಗ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಜಯಪ್ರಕಾಶ್ ಅವರ ಪತ್ನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೈ ಮತ್ತು ತಲೆಗೆ ಗಾಯಗಳಾಗಿವೆ. ಆದಿದೇವ್ ಅವರ ತಲೆ ಮತ್ತು ಎಡ ಕಿವಿಗೆ ಗಾಯವಾಗಿದ್ದು, ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆ ಬಳಿಕ ಬಾಲಕ‌ ನಿನ್ನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದೇ ದಿನ ಪೊಲೀಸರು ಜಿತೇಶ್‌ನನ್ನು ಬಂಧಿಸಿದ್ದರು. ಜಯಪ್ರಕಾಶ್ ಮತ್ತು ಆರೋಪಿಯ ನಡುವೆ ವ್ಯವಹಾರಕ್ಕೆ ಸಂಬಂಧಿಸಿ ವೈಯಕ್ತಿಕ ದೋಷ ಇತ್ತು ಎನ್ನಲಾಗಿದೆ.

- Advertisement -

Related news

error: Content is protected !!