Saturday, June 28, 2025
spot_imgspot_img
spot_imgspot_img

ಕೆಎಸ್ಆರ್‌ಟಿ‍ಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿಟ್ಲದ ಯುವತಿಯ ಬ್ಯಾಗ್‌ನಿಂದ ಸಾವಿರಾರು ರೂ.ಮೌಲ್ಯದ ಸೊತ್ತು ಕಳವು

- Advertisement -
- Advertisement -

ಪುತ್ತೂರು: ಬೆಂಗಳೂರುನಿಂದ ಪುತ್ತೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಬರುತ್ತಿದ್ದ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಸಾವಿರಾರು ರೂ.ಮೌಲ್ಯದ ಸೊತ್ತುಗಳು ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಪುಣಚ ಗ್ರಾಮದ ಅಜೇರು ನಿವಾಸಿ ದಿವಾಕರ ನಾಯಕ್‌ ಎಂಬವರ ಪುತ್ರಿ ದೀಪಿಕಾ ಅವರ ಬ್ಯಾಗ್‌ನಿಂದ ಲ್ಯಾಪ್‌ಟಾಪ್, ಸ್ಯಾಮ್‌ಸಂಗ್‌ ಕಂಪನಿಯ ಮೊಬೈಲ್, ಡೇನಿಯಲ್ ಕ್ರೇನ್ ಕಂಪೆನಿಯ ವಾಚ್ ಸಹಿತ ಒಟ್ಟು ರೂ.53 ಸಾವಿರ ಮೌಲ್ಯದ ಸೊತ್ತು ಕಳವಾಗಿದೆ. ಅವರು ಬೆಂಗಳೂರಿನ ಟಿಸಿಎಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಜು.26ರಂದು ರಾತ್ರಿ ಬೆಂಗಳೂರಿನಿಂದ ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪುಯಾಣಿಸಿದ್ದರು. ಪುತ್ತೂರಿಗೆ ತಲುಪಿದಾಗ ಬೊಳುವಾರು ಎಂಬಲ್ಲಿ ಬ್ಯಾಗ್ ನೋಡಿದಾಗ ಸೊತ್ತುಗಳು ಕಳವಾಗಿರುವುದು ಬೆಳಕಿಗೆ ಬಂದಿರುವ ಕುರಿತು ಅವರು ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!