Sunday, June 29, 2025
spot_imgspot_img
spot_imgspot_img

ಮಗನ ಅನಾರೋಗ್ಯಕ್ಕೆ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ತಾಯಿ

- Advertisement -
- Advertisement -

ಮಗನ ಅನಾರೋಗ್ಯಕ್ಕೆ ಜಿಗುಪ್ಸೆಗೊಂಡ ತಾಯಿ ಸವದತ್ತಿ ತಾಲೂಕಿನ ಗೊರವನಕೊಳ್ಳದ ಬಳಿಯ ನವಿಲು ತೀರ್ಥ ಜಲಾಶಯ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಭಾನುವಾರ ನಡೆದಿದೆ. ಮಗನ ಆರೈಕೆ ಮಾಡಲು ಆಸ್ಟ್ರೇಲಿಯಾದಿಂದ ತಾಯಿ ಬಂದಿದ್ದರು , ಮಗನ ಅನಾರೋಗ್ಯ ಕಂಡು ಚಿಂತೆ, ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ

ಮಹಿಳೆಯ ಶವ ಪತ್ತೆಯಾಗಿದ್ದು,  ಧಾರವಾಡ ನಗರದ ಸಪ್ತಾಪುರ ನಿವಾಸಿ ಪ್ರಿಯದರ್ಶಿನಿ ಲಿಂಗರಾಜ್ ಪಾಟೀಲ್(40) ಮೃತ ತಾಯಿ. ಪ್ರೀಯದರ್ಶಿನಿ ಪತಿ ಲಿಂಗರಾಜ್​ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್ ಇಂಜಿನೀಯರ್ ಆಗಿದ್ದು,ಮಗನ ಆರೈಕೆ ಮಾಡಲು ಆಸ್ಟ್ರೇಲಿಯಾದಿಂದ ಆಗಸ್ಟ್ 18ರಂದು ತಾಯಿ ಪ್ರೀಯದರ್ಶಿನಿ ಆಗಮಿಸಿದ್ದರು. ಮಗ ಅಮರ್ಥ್ಯನ ಅನಾರೋಗ್ಯ ಕಂಡು ಚಿಂತೆ ಹಚ್ಚಿಕೊಂಡು, ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಸವದತ್ತಿ ಠಾಣೆಯಲ್ಲಿ ಪ್ರಿಯದರ್ಶಿನಿ ತಂದೆ ಸುಬರಾಯ ದೇಸಾಯಿ ಆತ್ಮಹತ್ಯೆ ಅಂತಾ ಕೇಸ್ ದಾಖಲಿಸಿದ್ದಾರೆ.

- Advertisement -

Related news

error: Content is protected !!