Friday, June 27, 2025
spot_imgspot_img
spot_imgspot_img

ವಿಟ್ಲ ಸ್ಥಳೀಯ ಸಂಸ್ಥೆ ವತಿಯಿಂದ “ಜಿಲ್ಲಾ ಉತ್ಸವ” ಕಾರ್ಯಕ್ರಮದ ಪೂರ್ವಭಾವಿ ಸಭೆ

- Advertisement -
- Advertisement -

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಆಗಿದ್ದು, ಯುವ ಜನರಲ್ಲಿ ದೇಶಾಭಿಮಾನ, ಕ್ರೀಡೆ ಮತ್ತು ಸೇವಾ ಮನೋಭಾವ, ಕ್ರಿಯಾಶೀಲತೆ, ಸಚ್ಚಾರಿತ್ರ‍್ಯ ಜೀವನ ಕೌಶಲ್ಯ ಮತ್ತು ನಾಯಕತ್ವ ಗುಣಗಳನ್ನು ಕಲಿಸುವುದರ ಜೊತೆಗೆ, ಸರ್ವಧರ್ಮಗಳ ಸಮನ್ವಯತೆಯನ್ನು ಸಾರುವುದರೊಂದಿಗೆ, ಶಿಸ್ತಿನ ನಾಗರಿಕರನ್ನಾಗಿ ನಿರ್ಮಾಣ ಮಾಡುವ ಸ್ವಯಂಸೇವಾ ಸಂಸ್ಥೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 19 ಸ್ಥಳೀಯ ಸಂಸ್ಥೆಗಳನ್ನು ಹೊಂದಿದ್ದು, ಸುಮಾರು 50 ಸಾವಿರ ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ.

ವಿಟ್ಲ ಲಯನ್ಸ್ ಸ್ಥಳೀಯ ಸಂಸ್ಥೆ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆ ಜಿಲ್ಲಾ ಸಂಸ್ಥೆ ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಂತೆ ವಿಟ್ಲ ಸ್ಥಳೀಯ ಸಂಸ್ಥೆ ವತಿಯಿಂದ ನವೆಂಬರ್ ತಿಂಗಳಲ್ಲಿ “ಜಿಲ್ಲಾ ಉತ್ಸವ” ಕಾರ್ಯಕ್ರಮವನ್ನು ವಿಟ್ಲದಲ್ಲಿ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲು ಭಾರತ್ ಸ್ಕೌಟ್ &ಗೈಡ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಪಡಿಯಾರ್ ಅಧ್ಯಕ್ಷತೆ ಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಈ ಸಭೆಯಲ್ಲಿ ಸುರಕ್ಷಾ ಹೆಲ್ತ್ ಸೆಂಟರ್ ಡಾ. ಗೀತಾ ಪ್ರಕಾಶ್, ಹೊರೈಝನ್ ವಿದ್ಯಾಸಂಸ್ಥೆಯ ಸಂಚಾಲಕರಾದ ಮಹಮದ್ ಇಕ್ಬಾಲ್, ಪಟ್ಟಣ ಪಂಚಾಯತ್ ಕೌನ್ಸಿಲರ್ ಅಶ್ರಫ್ ವಿಕೆ, ಅಡ್ಯನಡ್ಕ ಜನತಾ ಎಜುಕೇಶನಲ್ ಸೊಸೈಟಿ ಆಡಳಿತಾಧಿಕಾರಿ ರಮೇಶ ಎಂ. ಬಾಯಾರು, ಎಂ ಲೂವಿಸ್ ಮಸ್ಕರೇಹ್ನಸ್, ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷರಾದ ಪ್ರಭಾಕರ ದಂಬೆಕಾನ, ವಿಠಲ್ ಜೇಸಿಸ್ ಸಂಸ್ಥೆಯ ಆಡಳಿತಾಧಿಕಾರಿ ರಾಧಾಕೃಷ್ಣ, ಸಂತೋಷ ಶೆಟ್ಟಿ ಪೆಲತ್ತಡ್ಕ, ಬಾಬು ಕೊಪ್ಪಳ, ವಿಠ್ಠಲ ಪ.ಪೂರ್ವ ಕಾಲೇಜು ಪ್ರಾಂಶುಪಾಲರಾದ ಆದರ್ಶಚೊಕ್ಕಾಡಿ, ವಿಟ್ಲ ಸರ್ಕಾರಿ ಮಾದರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯನಿ ಶ್ರೀಮತಿ ಪುಷ್ಪ, ವಿಠಲ್ ಹೈಸ್ಕೂಲ್ ನ ಮುಖ್ಯೋಪಾಧ್ಯಾಯರಾದ ಕಿರಣ್ ಕುಮಾರ್ ಬ್ರಹ್ಮಾವರ, ವಿಟಿವಿ ನಿರ್ದೇಶಕ ರಾಮದಾಸ್ ಶೆಟ್ಟಿ ವಿಟ್ಲ, ವಿಟ್ಲ ಸರಕಾರಿ ಮಾದರಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ರವಿಶಂಕರ್ ಸಿ., ರಾಜಶೇಖರ್, ರಾಜೇಶ್ ವಿಟ್ಲ, ಕೃಷ್ಣಯ್ಯ ಕೆ, ರವಿವರ್ಮ, ಮೋಹನ್ ಕಟ್ಟೆ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಜಯರಾಮ್ ಬಳ್ಳಾಲ್, ವಿಟ್ಟಲ್ ಜೂನಿಯರ್ ಕಾಲೇಜ್ ಉಪನ್ಯಾಸಕಿ ಜಲಜಾಕ್ಷಿ ವಿಟ್ಲ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ನಾರಾಯಣ ನಾಯಕ್ ಕೋಶಾಧಿಕಾರಿ ವಿಶ್ವನಾಥ್ ಗೌಡ & ಇಸ್ಮಾಯಿಲ್, ಜತೆ ಕಾರ್ಯದರ್ಶಿಗಳಾದ ಜಯಶ್ರೀ ಜಿ. & ಹೆಲೆನ್ ಪುಡ್ತಾದೊ, ಕಾರ್ಯಕಾರಣಿ ಸಮಿತಿಯ ಸದಸ್ಯರಾದ ದಯಾನಂದ ಇವರು ಉಪಸ್ಥಿತರಿದ್ದು ಕಾರ್ಯಕ್ರಮದ ಆಯೋಜನೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು

- Advertisement -

Related news

error: Content is protected !!