Saturday, June 28, 2025
spot_imgspot_img
spot_imgspot_img

ಬೆಳ್ತಂಗಡಿ:ಅಟೋ ರಿಕ್ಷಾ ನಿರ್ಲಕ್ಷ ಚಾಲನೆ ಮಗುವೊಂದು ರಿಕ್ಷಾದಿಂದ ಹೊರಗೆ ಎಸೆಯಲ್ಪಟ್ಟು ಗಂಭೀರ

- Advertisement -
- Advertisement -

ಬೆಳ್ತಂಗಡಿ:ಚಾಲಕ ಅಟೋ ರಿಕ್ಷಾವನ್ನು ತಿರುವು ರಸ್ತೆಯಲ್ಲಿ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಪ್ರಯಾಣಿಸುತ್ತಿದ್ದ ಮಗುವೊಂದು ರಿಕ್ಷಾದಿಂದ ಹೊರಗೆ ರಸ್ತೆಗೆ ಎಸೆಯಲ್ಪಟ್ಟು ಪ್ರಜ್ಞಾ ಹೀನ ಸ್ಥಿತಿಯಲ್ಲಿರುವ ಘಟನೆ ಕಡಿರುದ್ಯಾವರ ಗ್ರಾಮ ಬೆಳ್ತಂಗಡಿಯಲ್ಲಿ ನಡೆದಿದೆ

ಕಡಿರುದ್ಯಾವರ ಗ್ರಾಮ ಬೆಳ್ತಂಗಡಿ ನಿವಾಸಿ ಅಶ್ರಫ್‌ ಇಸ್ಮಾಯಿಲ್‌ ಕುರುಡ್ಯ ಎಂಬವರು ಮಗಳ ಚಿಕಿತ್ಸೆಗಾಗಿ ತನ್ನ ತಮ್ಮ ಮುಸ್ತಾಫಾ ಎಂಬವರು ಚಲಾಯಿಸುತ್ತಿದ್ದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಹೋಂಡಾ ಶೋರೂಂನ ತಿರುವು ರಸ್ತೆಯಲ್ಲಿ ಅಟೋ ರಿಕ್ಷಾದ ಚಾಲಕ ಅಟೋ ರಿಕ್ಷಾವನ್ನು ತಿರುವು ರಸ್ತೆಯಲ್ಲಿ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಪ್ರಯಾಣಿಸುತ್ತಿದ್ದ ಅಶ್ರಫ್‌ ಇಸ್ಮಾಯಿಲ್‌ ಮಗಳು ಸಫಾ ಅಜ್ಮೀಯು ರಿಕ್ಷಾದಿಂದ ಹೊರಗೆ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಾಯಗೊಂಡು ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಘಟನೆ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 86/2023 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!