- Advertisement -
- Advertisement -
ಸುಳ್ಯ: ಸುಳ್ಯ ಲಯನ್ಸ್ ಕ್ಲಬ್ ಸುಳ್ಯ ನಗರದ 52 ಕೊರೊನಾ ವಾರಿಯರ್ ಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸುವ ಮೂಲಕ ಭೇಷ್ ಎನಿಸಿಕೊಂಡಿದೆ.
ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಸ್ವಚ್ಛತಾ ಕಾರ್ಯಕರ್ತರು, ಗೃಹರಕ್ಷಕ ದಳ ,ಅಂಗನವಾಡಿ ಕಾರ್ಯಕರ್ತೆಯರು, ಸೇರಿದಂತೆ ಸುಮಾರು 52 ಮಂದಿ ಕೊರೊನಾ ವಾರಿಯರ್ ಗಳನ್ನು ಅದ್ದೂರಿ ಕಾರ್ಯಕ್ರಮ ಮೂಲಕ ಸನ್ಮಾನಿಸಲಾಯಿತು.
ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಮತ್ತು ಪಂಜದ ಮಹಾತ್ಮ ಗಾಂಧಿ ವಿದ್ಯಾ ಪೀಠದ ಕಾರ್ಯದರ್ಶಿ ಪುರುಷೋತ್ತಮ ಮುಡೂರು ಮುಖ್ಯ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಂ.ಬಿ.ಸದಾಶಿವ ಅವರು ಮುಖ್ಯ ಭಾಷಣ ಮಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪೆಲತ್ತಡ್ಕ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
- Advertisement -