Sunday, June 29, 2025
spot_imgspot_img
spot_imgspot_img

ಮಾಸ್ಕ್ ಧರಿಸದವರಿಗೆ ದಂಡ ಹಾಕುವ ನೆಪದಲ್ಲಿ ಸರ್ಕಾರ ಕಿರುಕುಳ ಕೊಡುತ್ತಿದೆ-ಡಿಕೆ ಶಿವಕುಮಾರ್

- Advertisement -
- Advertisement -

ಬೆಂಗಳೂರು: ಮಾಸ್ಕ್ ಧರಿಸದವರಿಗೆ ದಂಡ ಹಾಕುವ ನೆಪದಲ್ಲಿ ಕಿರುಕುಳ ಕೊಡುತ್ತಿದೆ ಅಂತಾ ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.


ಮಾಸ್ಕ್​ ಹಾಕದ ಜನರಿಗೆ 1000 ರೂಪಾಯಿ ದಂಡವನ್ನ ವಿಧಿಸಲಾಗುತ್ತಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಡಿಕೆಎಸ್​, ಸರ್ಕಾರ ಮೊದಲು ಮಾಸ್ಕ್​ ಬಗ್ಗೆ ಸರಿಯಾಗಿ ಅರಿವು ಮೂಡಿಸಬೇಕು. ತುಂಬಾ ಹೊತ್ತು ಮಾಸ್ಕ್​ ಹಾಕಿದ್ರೆ ಉಸಿರಾಟಡಲು ಸಮಸ್ಯೆ ಆಗುತ್ತದೆ. ಹಲವರಿಗೆ ಹಲವು ಸಮಸ್ಯೆಗಳು ಇರುತ್ತವೆ. ದಂಡ ಹಾಕುವ ಮೂಲಕ‌‌ ಅಧಿಕಾರಿಗಳ ವಸೂಲಿಗೆ ದಾರಿ‌ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.

ಮಾಸ್ಕ್ ಬಗ್ಗೆ ಯಾವ ತಿಳುವಳಿಕೆ ಕೊಡಬೇಕೋ ಕೊಡಿ. ಆದ್ರೆ ವಸೂಲಿಗೆ ಅವಕಾಶ ಬೇಡ ಅಂತಾ ರಾಜ್ಯ ಸರ್ಕಾರಕ್ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!