Saturday, June 28, 2025
spot_imgspot_img
spot_imgspot_img

ಕಂಬಳಾಭಿಮಾನಿಗಳ ಸಡಗರ ಸಂಭ್ರಮದ ದಿನಗಳು ಇಂದಿನಿಂದ ಪ್ರಾರಂಭ

- Advertisement -
- Advertisement -

ಕಂಬಳ ಋತು ಪ್ರಾರಂಭದೊಂದಿಗೆ ಇಂದಿನಿಂದ ಕರಾವಳಿಯಲ್ಲಿ ಹಬ್ಬದ ವಾತಾವರಣವಾಗಿ ಮೂಡಿಬರಲಿದೆ.

ನಮ್ಮ ತುಳುನಾಡಿನ ಹಿರಿಮೆ ಗರಿಮೆಯ ಸಾಂಸ್ಕೃತಿಕ ಕ್ರೀಡೆಯಾದ ಕಂಬಳದ ಸಂಭ್ರಮ ಸಡಗರದಲ್ಲಿ ಪಾಲ್ಗೊಳ್ಳಲು, ವೈಭವವನ್ನು ನೋಡಲು,ಮಣ್ಣಿನ ಮಕ್ಕಳ ಪ್ರೀತಿ ಆತಿಥ್ಯವನ್ನು ಅನುಭವಿಸಲು, ಜೊತೆಗೆ ಕರಾವಳಿಯ ಸೊಭಗನ್ನು ಸವಿಯಲು ಎಲ್ಲರಿಗೂ ಆತ್ಮೀಯ ಸ್ವಾಗತ.

ಕಂಬಳ ಆಯೋಜಕರಿಗೆ, ಕೋಣಗಳ ಮಾಲೀಕರಿಗೆ, ಓಟಗಾರರಿಗೆ , ತೀರ್ಪುಗಾರರಿಗೆ , ವಿಶೇಷವಾಗಿ ಕಂಬಳಾಭಿಮಾನಿಗಳಿಗೆ ಶುಭ ಹಾರೈಕೆಗಳು. ಎಲ್ಲರೂ ಒಟ್ಟಾಗಿ ಒಂದಾಗಿ ಕಂಬಳವನ್ನು ಉಳಿಸೋಣ ಬೆಳೆಸೋಣ. ನಮ್ಮ ತುಳುವ ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸೋಣ.

ಈ ಹಿಂದೆ ಕಂಬಳ ನಡೆಸಲು ಪೇಟಾ ಸಂಸ್ಥೆಯು ವಿರೋಧ ವ್ಯಕ್ತಪಡಿಸಿರುವ ಸಂಧರ್ಭದಲ್ಲಿ ಹೋರಾಟದ ಮೂಲಕ‌ ಕಂಬಳ ಉಳಿಸುವ ಯೋಜನೆಯಲ್ಲಿ ಮಂಗಳೂರು ಭಾಗದಲ್ಲಿ ರಾಮ ಲಕ್ಷ್ಮಣ ಜೋಡುಕರೆ ಕಂಬಳ ಅಯೋಜನೆ ಮಾಡಿದ ಕೀರ್ತಿ ನಿವೃತ್ತ ಸೇನಾನಿ,ಭಾಜಪದ ಜಿಲ್ಲಾ ಮಾಜಿ ಪ್ರಧಾನ ‌ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಸಲ್ಲುತ್ತದೆ.

- Advertisement -

Related news

error: Content is protected !!