Sunday, June 29, 2025
spot_imgspot_img
spot_imgspot_img

ಮೂರು ಅಂತಸ್ತಿನ ಜ್ಯುವೆಲ್ಲರಿ ಮಳಿಗೆಯಲ್ಲಿ ಅಗ್ನಿ ದುರಂತ: ಚಿನ್ನಾಭರಣ ಬೆಂಕಿಗಾಹುತಿ..!

- Advertisement -
- Advertisement -

ಕೆಜಿಪಿ ಜ್ಯುವೆಲ್ಲರಿ ಮಳಿಗೆಯಲ್ಲಿ ಅಗ್ನಿ ದುರಂತ ಸಂಭವಿಸಿ ಮೂರು ಅಂತಸ್ತಿನ ಕಟ್ಟಡ ಬೆಂಕಿಗೆ ಆಹುತಿಯಾದ ಘಟನೆ ಕೊಪ್ಪಳದ ಗಂಗಾವತಿ ನಗರದ ಗಣೇಶ ವೃತ್ತದಲ್ಲಿ ನಡೆದಿದೆ.

ತಡರಾತ್ರಿ ವೇಳೆ ಜುವೆಲ್ಲರಿ ಶಾಪ್ ಇರುವ ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಇಡೀ ವ್ಯಾಪಿಸಿ ಹೊತ್ತಿ ಉರಿದಿದೆ. ಜನನಿಬಿಡ ಪ್ರದೇಶ ಆದ ಕಾರಣ ಭಾರೀ ಅನಾಹುತ ತಪ್ಪಿದೆ. ಕೂಡಲೇ ಸ್ಥಳಕ್ಕೆ 4 ಅಗ್ನಿಶಾಮಕ ದಳದ ವಾಹನ ಆಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದೆ. ಈ ಮೂರು ಮಹಡಿಯ ಕೆಜಿಪಿ ಕಾಂಪ್ಲೆಕ್ಸ್ ನಲ್ಲಿ ಚಿನ್ನಾಭರಣ ಹಾಗೂ ಬಟ್ಟೆ ಅಂಗಡಿಗಳು ಇದ್ದವು. ಸತತ 6ಗಂಟೆ ಕಾರ್ಯಾಚರಣೆ ನಡೆದಿದೆ. ಆದರೆ ಅಷ್ಟರಲ್ಲಿ ಚಿನ್ನಾಭರಣ ಬೆಂಕಿಗಾಹುತಿಯಾಗಿದೆ.

- Advertisement -

Related news

error: Content is protected !!