Sunday, June 29, 2025
spot_imgspot_img
spot_imgspot_img

ಭೂ ವಿವಾದ-ದೇವಾಲಯದ ಅರ್ಚಕರನ್ನು ಜೀವಂತ ಸುಟ್ಟ ಘಟನೆ

- Advertisement -
- Advertisement -

ರಾಜಸ್ಥಾನ: ರಾಜಸ್ಥಾನದ ಕರೌಲಿ ಜಿಲ್ಲೆಯ ಸಪೋತ್ರಾದಲ್ಲಿ ಭೂಮಿಯ ವಿಷಯವಾಗಿ ನಡೆದ ಗಲಾಟೆ ವೇಳೆ ಗ್ರಾಮದ ರಾಧಾ ಕೃಷ್ಣ ದೇವಾಲಯದ ಅರ್ಚಕ ಬಾಬುಲಾಲ್ಅರ್ಚಕರೊಬ್ಬರನ್ನು ಜೀವಂತವಾಗಿ ಸುಟ್ಟಿರುವ ಘಟನೆ ನಡೆದಿದೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅರ್ಚಕ ಗುರುವಾರ ಅಕ್ಟೋಬರ್ 8ರಂದು ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಕೈಲಾಶ್ ಮೀನಾನನ್ನು ಬಂಧಿಸಲಾಗಿದೆ ಎಂದು ಕರೌಲಿಯ ಎಸ್ಪಿ ಮೃದೂಲ್ ಕಚ್ವಾ ಹೇಳಿದ್ದಾರೆ.ದೇವಾಲಯದ ಟ್ರಸ್ಟ್‌ಗೆ ಸೇರಿದ ಸುಮಾರು 5.2 ಎಕರೆ ಜಮೀನು ದೇವಾಲಯದ ಪ್ರಧಾನ ಅರ್ಚಕರ ಕುಟುಂಬಕ್ಕೆ ನೀಡಲಾಗಿತ್ತು.

ಆದರೆ ಜಮೀನಿನ ಮೇಲೆ ಹಕ್ಕು ಸಾಧಿಸಲು ಆರೋಪಿ ಕೈಲಾಶ್ ಮೀನಾ ಪ್ರಯತ್ನಿಸಿ ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.


- Advertisement -

Related news

error: Content is protected !!