- Advertisement -
- Advertisement -
ತೋಟದಲ್ಲಿ ಅಡಿಕೆ ಹೆಕ್ಕಲು ಹೋದ ಮಹಿಳೆ ತಮ್ಮ ತೋಟದ ಪಕ್ಕದಲ್ಲಿರುವ ಹೊಳೆ ಕಟ್ಟಿನ ನೀರಿಗೆ ಬಿದ್ದು ಮೃತಪಟ್ಟ ಘಟನೆ ಹಳ್ಳಿಹೊಳೆಯಲ್ಲಿ ನಡೆದಿದೆ.
ಮೂಕಾಂಬು(45) ಅವರು ಮೃತಪಟ್ಟ ಮಹಿಳೆ. ಪತಿ ಸುರೇಶ್ (47) ಅವರು ಪತ್ನಿಯನ್ನು ಹುಡುಕುತ್ತ ಹೋದಾಗ ಹೊಳೆ ಕಟ್ಟಿನ ನೀರಿನಲ್ಲಿ ಮೂಕಾಂಬು ಅವರು ತೇಲುತ್ತಿದ್ದರು. ಕೂಡಲೆ ಹಳ್ಳಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದ್ದಾಗಿ ತಿಳಿಸಿದರು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -