Saturday, June 28, 2025
spot_imgspot_img
spot_imgspot_img

ಬೆಳ್ಳಾರೆ: ಜಮೀನು ವಿಚಾರದಲ್ಲಿ ತಕರಾರು : ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಜೀವ ಬೆದರಿಕೆ ಒಡ್ಡಿ ,ಮನೆಯ ಕಿಟಕಿಗಳಿಗೆ ಹಾನಿ

- Advertisement -
- Advertisement -

ಬೆಳ್ಳಾರೆ: ವ್ಯಕ್ತಿಯೋರ್ವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಜೀವ ಬೆದರಿಕೆ ಒಡ್ಡಿ ಅವ್ಯಾಚವಾಗಿ ಬೈದು, ಮನೆಯ ಕಿಟಕಿಗಳಿಗೆ ಹಾನಿ ಮಾಡಿದ ಘಟನೆ ಕಾಯಿಮಣ ಗ್ರಾಮ ಕಡಬ ಎಂಬಲ್ಲಿ ನಡೆದಿದೆ.

ಕಾಯಿಮಣ ಗ್ರಾಮ ಕಡಬ ನಿವಾಸಿ ಟಿ. ಪದ್ಮಯ್ಯ ಗೌಡ ಹಾಗೂ ಅವರ ಸಹೋದರ ಮೋನಪ್ಪ ಗೌಡರ ಮಧ್ಯೆ ಜಮೀನು ವಿಚಾರದಲ್ಲಿ ತಕರಾರಿದ್ದು, ದಿನಾಂಕ 21-02-2024 ರಂದು ರಾತ್ರಿ ಪದ್ಮಯ್ಯ ಗೌಡ ಹಾಗೂ ಅವರ ಪತ್ನಿ ಮನೆಯಲ್ಲಿದ್ದಾಗ, ಆರೋಪಿಗಳಾದ ಮೋನಪ್ಪ ಗೌಡ ಹಾಗೂ ಅವರ ಮಗ ನವೀನ ಎಂಬಾತನು, ಕೈಯಲ್ಲಿ ಕತ್ತಿ ಹಿಡಿದುಕೊಂಡು ಪದ್ಮಯ್ಯ ಗೌಡರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಜೀವ ಬೆದರಿಕೆ ಒಡ್ಡಿ ಅವ್ಯಾಚವಾಗಿ ಬೈದು, ಬಳಿಕ ಆರೋಪಿ ನವೀನನು ಮನೆಯ ಕಿಟಕಿಗಳಿಗೆ ಹಾನಿಮಾಡಿದ್ದಾನೆ. ಘಟನೆ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:20/2024, ಕಲಂ : 447,427,504, 506,ಜೊತೆಗೆ 34 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!