Monday, June 30, 2025
spot_imgspot_img
spot_imgspot_img

ಕಂಬಳಬೆಟ್ಟು: ಧರ್ಮನಗರದ ಮಂದಿರದಲ್ಲಿ ನಡೆಯುತ್ತಿದ್ದ ಚೈತ್ರ ಶಿಬಿರದ ಸಮಾರೋಪ ಸಮಾರಂಭ

- Advertisement -
- Advertisement -

ಕಂಬಳಬೆಟ್ಟು : ಜಯದುರ್ಗಾಪರಮೇಶ್ವರಿ ಭಜನಾ ಸಮಿತಿ, ಹಾಗೂ ಗ್ರಾಮ ವಿಕಾಸ ಸಮಿತಿ ಇಡ್ಕಿದು ಸಹಯೋಗದಲ್ಲಿ ಕಂಬಳಬೆಟ್ಟು ಧರ್ಮನಗರದ ಮಂದಿರದಲ್ಲಿ ನಡೆಯುತ್ತಿದ್ದ ಚೈತ್ರ ಶಿಬಿರದ ಸಮಾರೋಪ ಕಾರ್ಯಕ್ರಮವು ಬೆಳಿಗ್ಗೆ 9.30 ರಿಂದ ದೀಪ ಪೂಜನಾ ಕಾರ್ಯಕ್ರಮದೊಂದಿಗೆ ನಡೆಯಿತು.

ರಾ.ಸ್ವಯಂ ಸೇವಕ ಸಂಘದ ಹಿರಿಯರಾದ ಪುಂಡರಿಕಾಕ್ಷ ಬೆಳ್ಳೂರು ದೀಪ ಪೂಜನಾ ನಡೆಸಿಕೊಟ್ಟರು. ನಂತರ ಶಿಬಿರಾರ್ಥಿಗಳು ತಾವು ಕಲಿತ ವಿವಿಧ ಕಲೆಗಳನ್ನು ಪ್ರದರ್ಶಿಸಿದರು. ಯೋಗ, ತಾಳ ಮದ್ದಳೆ, ನಾಟಕ ,ನೃತ್ಯ ಪ್ರದರ್ಶಿಸಿದರು.

ಸಮಾರೋಪ ಸಮಾರಾಂಭದಲ್ಲಿ ವಿಟ್ಲದ ಉದ್ಯಮಿ ಸುಬ್ರಾಯ ಪೈ ಮಾತನಾಡಿ ಎಲ್ಲಾ ಗ್ರಾಮಗಳಲ್ಲಿ ಈ ರೀತಿಯ ಸಂಸ್ಕಾರ ಕೊಡುವ ಶಿಬಿರ ನಡೆಯಬೇಕು ಎಂದು ಶುಭ ಹಾರೈಸಿದರು. ರಾ. ಸ್ವ. ಸಂಘದ ಮಂಗಳೂರು ವಿಭಾಗದ ಗ್ರಾಮ ವಿಕಾಸ ಸಂಯೋಜಕರಾದ ಜಿತೇಂದ್ರ ಪ್ರತಾಪನಗರ ಮಕ್ಕಳು ಕಲಿತ ಸಂಸ್ಕಾರವನ್ನು ಮುಂದುವರಿಸಲು ಮಕ್ಕಳ ಪೋಷಕರು ಪ್ರೋತ್ಸಹ ನೀಡಬೇಕು ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಶುಭ ಹಾರೈಸಿದರು.


ಶಿಬಿರಾಧಿಕಾರಿ ಸುಚಿತ್ರ ಮಾತಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀದೇವಿ ಮಾತಾಜಿ, ಲಕ್ಷ್ಮಿ ಮಾತಾಜಿ. ಆದಿತ್ಯ. ಶ್ರೀಹರಿ ಶರ್ಮ,ರಾಜೇಶ್ ಕೋಡಿಜಾಲ್. ಸುಂದರ ಧರ್ಮನಗರ, ನವೀನ ಮುಡಾಯಿಮರು, ಜೈದೀಪ್ ಅಮೈ, ವಿವಿಧ ಜವಾಬ್ದಾರಿ ನಿರ್ವಹಿಸಿದರು. ಶಿಬಿರಾರ್ಥಿ ಮಕ್ಕಳು ಪೂರ್ತಿ ಕಾರ್ಯಕ್ರಮ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

- Advertisement -

Related news

error: Content is protected !!