- Advertisement -
- Advertisement -



ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ ಮಹಾದೇವ ಮಿತ್ರ ಮಂಡಳಿ ಕಂಚಿಲ ಇದೀಗ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಮೂಲಕ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಇದರ ವತಿಯಿಂದ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಕಂಚಿಲದಲ್ಲಿ ನಡೆಯಿತು.
ಕಂಚಿಲ, ಚೌಕದ ಪಾಲು, ನೂಜಿಪಾಡಿ ಹಾಗೂ ಬೀಡಿನಪಾಲು ಪರಿಸರದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.
ಪುಸ್ತಕ ವಿತರಣೆ ಸಂದರ್ಭದಲ್ಲಿ ಪಂಚಾಯತ್ ಸದಸ್ಯೆ ವಿಜಯ ಸುಳ್ಯ, ಅಧ್ಯಕ್ಷ ಉದಯ ಕಂಚಿಲ, ಗೌರವ ಸಲಹೆಗಾರಾದ ಕೃಷ್ಣಪ್ಪ ಬಂಗೇರ ,ಜಿನ್ನಪ್ಪ ನಾಯ್ಕ್, ಮಹಾಬಲ ಪಾದ್ರಿಮೂಲೆ, ಕಂಚಿಲ ಮಹಾದೇವ ಮಿತ್ರ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ವಿದ್ಯಾರ್ಥಿಗಳು ಮತ್ತಿತ್ತರರು ಉಪಸ್ಥಿತರಿದ್ದರು.
- Advertisement -