Saturday, June 28, 2025
spot_imgspot_img
spot_imgspot_img

ಮಾಣಿ ಹಾಸನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಸಂಚಾರಕ್ಕೆ ಅಡಚಣೆ: ಗುತ್ತಿಗೆದಾರರ ವಿರುದ್ಧ ಆಕ್ರೋಶ- ಎರಡು ದಿನಗಳ ಒಳಗಾಗಿ ರಸ್ತೆ ಸರಿ ಪಡಿಸದಿದ್ದರೆ ಮಕ್ಕಳ ಜೊತೆ ರಸ್ತೆಗಿಳಿದು ಪ್ರತಿಭಟನೆ; ಶಾಲಾ ಶಿಕ್ಷಕರು, ಪೋಷಕರಿಂದ ಎಚ್ಚರಿಕೆ

- Advertisement -
- Advertisement -

ಮಾಣಿ ಹಾಸನ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಗೆ ಸಂಚಾರ ಕಲ್ಪಿಸುವ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾಯಿಯಿಂದ ಶಾಲಾ ಮಕ್ಕಳ ಸಂಚಾರಕ್ಕೆ ಅಡಚಣೆಯಾಗಿದೆ.

ಮಾಣಿ ಹಾಸನ ರಾಷ್ಟೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳು ಕಳೆದ ಅದೆಷ್ಟೋ ಸಮಯಗಳಿಂದ ಪ್ರಾರಂಭವಾಗಿದ್ದರೂ, ಈ ತನಕ ವಾಹನ ಸವಾರರಿಗೆ ಯಾವುದೇ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿ ಕೊಡದೇ ಇರುವುದು ಕಾಮಗಾರಿಯ ಗುತ್ತಿಗೆದಾರರ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತಿದೆ.

ರಸ್ತೆ ಅಭಿವೃದ್ಧಿ ಕಾಮಗಾರಿಯ ವೇಳೆ ರಸ್ತೆಗಳೆಲ್ಲವೂ ಕೆಸರುಮಯವಾಗಿದ್ದು, ತೀರಾ ಹದಗೆಟ್ಟು ನಿಂತಿದೆ. ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಗೆ ಸಂಚಾರ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಗುಂಡಿ ತೋಡಿ ಸಂಚಾರ ವ್ಯವಸ್ಥೆಯನ್ನು ತಡೆಗಟ್ಟಿದ್ದು, ಇದರಿಂದಾಗಿ ಅತೀ ಹೆಚ್ಚು ಸಂಖ್ಯೆಗಳನ್ನೊಳಗೊಂಡ ಮಾಣಿ ಬಾಲವಿಕಾಸದ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ತುಂಬಾ ಸಮಸ್ಯೆಯಾಗಿದೆ. ಶಾಲಾ ಪ್ರಾರಂಭದ ಬಗ್ಗೆ ಗುತ್ತಿಗೆದಾರರಿಗೆ ಜ್ಞಾನವಿಲ್ಲವೇ..? ಮಕ್ಕಳ ಸಂಚಾರಕ್ಕೆ ಸೂಕ್ತ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿಕೊಡಬಹುದಲ್ಲವೇ..? ಇನ್ನು ಎರಡು ದಿನಗಳಲ್ಲಿ ಶಾಲಾ ಮಕ್ಕಳಿಗೆ ಮುಖ್ಯ ರಸ್ತೆಯ ಮೂಲಕ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿಕೊಡದಿದ್ದರೆ, ಮಕ್ಕಳನ್ನು ರಸ್ತೆಗಿಳಿಸಿ ಪ್ರತಿಭಟನೆ ನಡೆಸಲಾಗುವುದೆಂದು ಶಾಲಾ ಶಿಕ್ಷಕ ವರ್ಗ ಹಾಗೂ ಮಕ್ಕಳ ಪೋಷಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!