ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಜಗದೀಶ್ ಕಜೆ ಕಣದಲ್ಲಿ


ಪುತ್ತೂರು : ರಾಷ್ಟ್ರೀಯ ವಿದ್ಯಾರ್ಥಿ ಸಂಘ NSUI ತಾಲೂಕು ಪ್ರತಿನಿಧಿಯಾಗಿ 2011 ರಲ್ಲಿ ಅಂದಿನ NSUI ಅಧ್ಯಕ್ಷ ಹರ್ಷದ್ ದರ್ಬೆಯವರು ಜಗದೀಶ್ ಕಜೆಯನ್ನು ನೇಮಕಗೊಳಿಸಿದ್ದರು
.
2017 ರಲ್ಲಿ ಇಂಟಕ್ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಿದ ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಲೂಕ್ಮಾನ್ ಬಂಟ್ವಾಳ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೆಸ್ ದ. ಕ ಜಿಲ್ಲಾ ಕಾರ್ಯದರ್ಶಿಯಾಗಿ 2021 ರಲ್ಲಿ ಕಜೆಯವರು ನೇಮಕಗೊಂಡಿದ್ದರು.
2003 ರಿಂದಲೇ ಡಾ ರಘು ಬೆಳ್ಳಿಪ್ಪಾಡಿ ಜೊತೆ ಸುಳ್ಯ ಪುತ್ತೂರು ಬಂಟ್ವಾಳ ಮೂಡಬಿದ್ರೆ ಕಾಪು ಸೇರಿದಂತೆ ಹಲವು ಕಡೆ ನಡೆದ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಅಲ್ಲದೆ ಕೇರಳದ ಕಾಸರಗೋಡು, ಉದುಮ ಮಂಜೇಶ್ವರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ..
ದಲಿತ ಸಮುದಾಯದ ಅತ್ಯಂತ ಪ್ರಭಾವಿ ಯುವ ನಾಯಕನಾಗಿ ಗುರುತಿಸಿಕೊಂಡಿರುವ ಜಗದೀಶ್ ಕಜೆ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪದಾಧಿಕಾರಿಯಾಗಿದ್ದು, ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದ ಕಜೆ ಪರ ಈಗಾಗಲೇ ಸ್ವಯಂಪ್ರೇರಿತರಾಗಿ ಹಲವಾರು ನಾಯಕರು ಯುವ ಸಮುದಾಯವನ್ನು ಭೇಟಿಯಾಗುತ್ತಿದ್ದು ರಹಸ್ಯ ಮತಭೇಟೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಶಾಸಕ ಅಶೋಕ್ ರೈ ಜೊತೆ ಧಾರ್ಮಿಕ ಕ್ಷೇತ್ರದಲ್ಲೂ ಕೆಲಸ ಮಾಡಿರುವ ಅನುಭವ ಹೊಂದಿರುವ ಕಜೆ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಗದೀಶ್ ಕಜೆ ಎಪಿಎಂಸಿ ಸದಸ್ಯರು ಮಾಜಿ NSUI ರಾಜ್ಯ ಕಾರ್ಯದರ್ಶಿ ಕಾರ್ತಿಕ್ ರೈ ಬೆಳ್ಳಿಪ್ಪಾಡಿ ರವರ ಶಿಷ್ಯ.