Friday, June 27, 2025
spot_imgspot_img
spot_imgspot_img

ಕಾವೇರಿ ವಿವಾದ : ಕರ್ನಾಟಕ-ತಮಿಳುನಾಡಿಗೆ ಮಹತ್ವದ ಸೂಚನೆ ಕೊಟ್ಟ CWMA

- Advertisement -
- Advertisement -

ಕಾವೇರಿ ನದಿಯಿಂದ ನಿಗದಿಗಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದಿದೆ. ಮುಂದಿನ‌ ತಿಂಗಳು ರಾಜ್ಯ ಹರಿಸಬೇಕಾದ ನೀರಿಗೆ ಜಮೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ವಾದ ಮಂಡಿಸಿದೆ. ಕರ್ನಾಟಕದ ಈ ವಾದವನ್ನು ಪರಿಗಣಿಸಿದ ಕಾವೇರಿ‌ ನೀರು ನಿರ್ವಹಣಾ ಪ್ರಾಧಿಕಾರವು, ಈಗ ನಿಗದಿಗಿಂತ ನೀರು ಹರಿದಿದೆ. ಅದನ್ನೇ ಮುಂದಿನ ತಿಂಗಳ ನೀರಿಗೆ ಜಮೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದೆ.

ಈವರೆಗೆ ತಮಿಳುನಾಡು ರಾಜ್ಯಕ್ಕೆ 71.56 ಟಿಎಂಸಿ ನೀರು ಹರಿಸಬೇಕಿತ್ತು. ಮಳೆ ಹೆಚ್ಚಾಗಿ ಸುರಿದಿರುವ ಪರಿಣಾಮ 170 ಟಿಎಂಸಿ ನೀರು ಹರಿದಿದೆ. ಅಂದರೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಹರಿದಿದೆ ಎಂದು ಕರ್ನಾಟಕದಿಂದ ವಾದ ಮಂಡಿಸಲಾಗಿದೆ.

ಎರಡೂ ರಾಜ್ಯಗಳು ಕಾವೇರಿ ನದಿ ನೀರನ್ನು ವಿವೇಚನೆಯಿಂದ ಬಳಸಿಕೊಳ್ಳಿ. ಜಲಾಶಯಗಳಲ್ಲಿ ನಿರನ್ನು ಸಂಗ್ರಹಿಸಿಟ್ಟು ಕೊಳ್ಳಿ ಎಂದು ಎರಡೂ ರಾಜ್ಯಗಳಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಲಹೆ ನೀಡಿದೆ.

- Advertisement -

Related news

error: Content is protected !!