Saturday, June 28, 2025
spot_imgspot_img
spot_imgspot_img

ವಿಟ್ಲ: 17 ನೇ ವರ್ಷದ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ವಿದ್ಯಾ ಗೋಪಾಲ ಹವನ ಕಾರ್ಯಕ್ರಮ : ವಿಟ್ಲ ಮುಖ್ಯರಸ್ತೆಯಲ್ಲಿ ಸಾಗಿಬಂದ ಮುದ್ದು ರಾಧ ಕೃಷ್ಣ ವೇಷಧಾರಿಗಳ ಆಕರ್ಷಣೀಯ ಶೋಭಾಯಾತ್ರೆ

- Advertisement -
- Advertisement -

ವಿಟ್ಲ: ವಿಶ್ವ ಹಿಂದೂ ಪರಿಷದ್‌ ಷಷ್ಠಿ ಪೂರ್ತಿ ಆಚರಣಾ ಸಮಿತಿ ವಿಟ್ಲ ಪ್ರಖಂಡ ಮತ್ತು ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಆಶ್ರಯದಲ್ಲಿ 17 ನೇ ವರ್ಷದ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ವಿದ್ಯಾ ಗೋಪಾಲ ಹವನ ಕಾರ್ಯಕ್ರಮ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಪಂಚಲಿಂಗೇಶ್ವರ ಸದನದಲ್ಲಿ ನಡೆಯಿತು.

ಬೆಳಗ್ಗೆ ವೇದಮೂರ್ತಿ ಶ್ರೀ ಉದಯೇಶ ಕೆದಿಲಾಯರ ಪೌರೋಹಿತ್ಯದಲ್ಲಿ ಶ್ರೀ ವಿದ್ಯಾಗೋಪಾಲ ಹವನ ಸಂಕಲ್ಪದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಬಳಿಕ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರಟ ಮುದ್ದು ರಾಧಾ-ಕೃಷ್ಣ ವೇಷಧಾರಿಗಳ ಶೋಭಾಯಾತ್ರೆಯನ್ನು ಸಾಮಾಜಿಕ ಕಾರ್ಯಕರ್ತರು ರಾಜೀವ ಭಂಡಾರಿ ಕುಂಡಕೋಳಿ ಉದ್ಘಾಟಿಸಿದರು.

ಶ್ರೀ ದಿವ್ಯ ಶಕ್ತಿ ಮಕ್ಕಳ ಕುಣಿತ ಭಜನೆ ತಂಡದಿಂದ ಕುಣಿತ ಭಜನೆಯೊಂದಿಗೆ ಸಾಗಿ ಬಂದ ಶೋಭಾಯಾತ್ರೆಯಲ್ಲಿ ನೂರಾರು ಮುದ್ದು ರಾಧ ಕೃಷ್ಣಗಳು ಶೋಭಾಯಾತ್ರೆಯ ಆಕರ್ಷಣೆಯಾಗಿ ಕಣ್ಮನ ಸೆಳೆಯಿತು.

ಬಳಿಕ ಮನೋರಂಜನ್‌ ಕರೈ, ನಿರ್ದೇಶಕರು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಿರಿಯ ಸ್ವಯಂಸೇವಕರು ತನಿಯಪ್ಪ ಮೂಲ್ಯ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ದೇವಿ ಪ್ರಸಾದ್‌ ಶೆಟ್ಟಿ ಪ್ರಧಾನ ಕಾರ್ಯದರ್ಶಿ ವಿ.ಹಿಂ.ಪ ಮಂಗಳೂರು ವಿಭಾಗ ಉಪಸ್ಥಿತರಿದ್ದು, ಶ್ರೀ ಕೃಷ್ಣ ಜನ್ಮಾಷ್ಟಮಿಯ ಬಗ್ಗೆ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಕೆ ಜಿ ವಿಟ್ಲ ಮುಡ್ನೂರು ಬೆಳೆ ವೈವಿಧ್ಯೀಕರಣ ಹಾಗೂ ನರ್ಸರಿ ವಿಭಾಗದಲ್ಲಿ ದ ಕ ಜಿಲ್ಲೆ ಶ್ರೇಷ್ಠ ಕೃಷಿ ಪ್ರಶಸ್ತಿ ವಿಜೇತರು, ಹಾಗೂ ಶುಭಾಶಂಸನ ಕು. ವಸುಧ ಉಪನ್ಯಾಸಕಿ ಭರತ ನಾಟ್ಯ ಹಾಗೂ ಯಕ್ಷಗಾನ ಕಲಾವಿದೆ ಬೋಳಂತೂರು, ವಿಟ್ಲ ಬಾಲಗೋಕುಲ ಸಮಿತಿಯ ಅಧ್ಯಕ್ಷರು ದೇವಿಪ್ರಸಾದ್‌ ಶೆಟ್ಟಿ ಬೆಂಞಣ್ತಿಮಾರ್‌ , ಗೌರವಾಧ್ಯಕ್ಷರು ಶ್ರೀಕಂಠ ವರ್ಮ ಉಪಸ್ಥಿತರಿದ್ದರು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಾಲಗೋಕುಲ ಮಕ್ಕಳಿಂದ ಸಾಂಸ್ಕೃತಿಕ ವೈಭವ ಹಾಗೂ ರಾಜೇಶ್‌ ಮಳಿ ಮತ್ತು ತಂಡ ಮಂಗಳೂರು ಇವರಿಂದ ಅಪೂರ್ವ ಜಾದೂ ಪ್ರದರ್ಶನ ನಡೆಯಿತು.

- Advertisement -

Related news

error: Content is protected !!