- Advertisement -
- Advertisement -




ಕೇಪು : ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಹಾನಿಯುಂಟಾದ ಘಟನೆ ಕೇಪು ಗ್ರಾಮದ ಕೋಡಂದೂರು ಪಟ್ಟುಮೂಲೆ ಎಂಬಲ್ಲಿ ನಡೆದಿದೆ.
ಪಟ್ಟುಮೂಲೆ ಜಯರಾಮ ನಾಯ್ಕ ಎಂಬವರ ಮನೆಗೆ ಇಂದು ಸಂಜೆ ಸುಮಾರು 4 ಗಂಟೆಗೆ ಸಿಡಿಲು ಬಡಿದಿದ್ದು, ಅಪಾರ ಪ್ರಮಾಣದ ವಿದ್ಯುತ್ ಪರಿಕರಗಳು ಹಾನಿಗೊಳಗಾಗಿದೆ. ಈ ಸಂದರ್ಭದಲ್ಲಿ ಮನೆಮಂದಿ ಸಮೀಪದ ಕೊಟ್ಟಿಗೆಯಲ್ಲಿ ಕೆಲಸ ಮಾಡಿಕೊಂಡು ಇದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

- Advertisement -